ಮುಂಬೈ ದಾಳಿಯ ರೂವಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಇದು ಪಾಕಿಸ್ತಾನದೊಂದಿಗಿನ ಸಮಗ್ರ ಮಾತುಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬುಧವಾರ ಸರ್ಕಾರ ಹೇಳಿದೆ.
ಮುಂಬೈ ದಾಳಿಯ ರೂವಾರಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಅದರ ಫಲಿತಾಂಶವನ್ನು ಪಾಕಿಸ್ತಾನ ಅನುಭವಿಸಲಿದೆ ಎಂದು ಹೇಳಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪ್ರಣೀತ್ ಕೌರ್ ಶಾಂತಿ ಬದ್ಧತೆಯನ್ನು ಪಾಕಿಸ್ತಾನ ಗೌರವಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೂ ಮುಂಚಿತವಾಗಿ ಪಾಕಿಸ್ತಾನದ ವಿದೇಶಾಂಗ ಇಲಾಖಾ ವಕ್ತಾರ ಅಬ್ದುಲ್ ಬಸಿತ್ ಅವರು, ಭಾರತದೊಂದಿಗಿನ ಯಾವುದೇ ಮಾತುಕತೆಯ ಕಾರ್ಯಸೂಚಿಯಲ್ಲಿ ಪಾಕಿಸ್ತಾನ ಸೇರಬೇಕು ಎಂಬ ಹೇಳಿಕೆ ನೀಡಿದ್ದರು.