ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನನ್ನು ಗ್ರಾಮಪಂಚಾಯತ್ ಆದೇಶದಂತೆ ಗ್ರಾಮಸ್ಥರು ಸೇರಿ ಬೂಟಿನಿಂದ ತಳಿಸಿದ ಘಟನೆ ವರದಿಯಾಗಿದೆ.
ಹುಡುಗಿ ಶೌಚಕ್ಕಾಗಿ ಬಯಲು ಕಡೆ ತೆರಳಿದ್ದ ವೇಳೆ, ಯುವಕ ದುಷ್ಕೃತ್ಯಕ್ಕೆ ಮುಂದಾಗಿದ್ದ ಎಂದು ದೂರಲಾಗಿದೆ.
ಬಾಲಕಿಯ ತಂದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದಾಗ, ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದರೆನ್ನಲಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ಖೇರಾ ಕುರ್ತಮ್ ಗ್ರಾಮದ ಪಂಚಾಯತ್ ಮಧ್ಯಪ್ರವೇಶ ಮಾಡಿತು. ಅಲ್ಲದೆ ಹುಡುಗನಿಗೆ ಬೂಟಿನೇಟು ನೀಡಲು ಆದೇಶಿಸಿತು.
ಹಡುಗನಿಗೆ ಚಪ್ಪಲಿಯೇಟು ನೀಡಿದ ಗ್ರಾಮಸ್ಥರು ಬಳಿಕ ಆತನನ್ನು ಬಿಟ್ಟಿದ್ದಾರೆ.