ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕುದಿವೆಣ್ಣೆಯಲ್ಲಿ ಮಕ್ಕಳ ಕೈ ಮುಳುಗಿಸಿ ಸತ್ಯಪ್ರಮಾಣ (Children | Hot oil | Andhra Pradesh | Cellphone)
 
ನೆರೆಮನೆಯವರ ಸೆಲ್‌ಪೋನ್‌ಗಳನ್ನು ಕದ್ದ ಮಕ್ಕಳ ಕೈಯನ್ನು ಕುದಿವ ಎಣ್ಣೆಗೆ ಮುಳುಗಿಸಿ ಸತ್ಯಪ್ರಮಾಣ ಮಾಡಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರಿನಿಂದ ವರದಿಯಾಗಿದೆ.

ನೀವು ನಿಜವಾಗಿಯೂ ತಪ್ಪು ಮಾಡಿಲ್ಲದಿದ್ದರೆ ನಿಮಗೇನೂ ಆಗುವುದಿಲ್ಲ ಎಂದು ನಂಬಿಸಿ ಈ ಮಕ್ಕಳ ಕೈಯನ್ನು ಒತ್ತಾಯಪೂರ್ವಕವಾಗಿ ಕುದಿವ ಎಣ್ಣೆಯಲ್ಲಿ ಮುಳುಗಿಸುವಂತೆ ಮಾಡಲಾಗಿತ್ತು.

ಎಲ್ಲಾ ಐದು ಮಕ್ಕಳ ಕೈಗಳಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಟೂರು ಜಿಲ್ಲೆಯ ಜಗಮಹೇಶ್ವಪುರಂ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಈ ಮಕ್ಕಳಲ್ಲಿ ಈ ರೀತಿಯ ಸತ್ಯಪ್ರಮಾಣ ಮಾಡಿಸಿ ಕುದಿವ ಎಣ್ಣೆಗೆ ಕೈ ಮುಳುಗಿಸುವಂತೆ ಮಾಡಿರುವ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ವರದಿಯು ಈಗಿನ ಕಾಲದಲ್ಲೂ ಇಂತಹ ನಂಬಿಕೆಗಳಿವೆಯೇ ಎಂಬ ಅಚ್ಚರಿ ಹುಟ್ಟಿಸುವಂತೆ ಮಾಡಿದೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ