ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಮೇಲೆ ಕ್ರಮಕೈಗೊಳ್ಳದಂತೆ ಆಡ್ವಾಣಿ ಅಟಲ್‌ರನ್ನು ತಡೆದಿದ್ದರು (Advani | Vajpayee | Modi | Jaswant Singh)
 
ಬಿಜೆಪಿ ನಾಯಕ ಆಜ್ವಾಣಿ ಮೇಲೆ ತನ್ನ ವಾಕ್‌ಪ್ರಹಾರವನ್ನು ಮುಂದುವರಿಸಿರುವ ಉಚ್ಚಾಟಿತ ನಾಯಕ ಜಸ್ವಂತ್ ಸಿಂಗ್ ಅವರು "ಗೋದ್ರಾ ಗಲಭೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ವಿರುದ್ಧ ಕ್ರಮಕೈಗೊಳ್ಳದಂತೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಆಡ್ವಾಣಿ ತಡೆದಿದ್ದರು" ಎಂಬುದಾಗಿ ಹೇಳಿದ್ದಾರೆ.

ಇದರಿಂದ ವ್ಯಾಕುಲಗೊಂಡಿದ್ದ ಆಗಿನ ಪ್ರಧಾನಿ ವಾಜಪೇಯಿ ಅವರು ತನ್ನ ಸಂಸದೀಯ ಕಚೇರಿಯಲ್ಲಿ ರಾಜೀನಾಮೆ ಪತ್ರ ಬರೆದಿಟ್ಟಿದ್ದರು. ಆ ವೇಳೆ ಸಂಸತ್ ಅಧಿವೇಶನ ನಡೆಯುತ್ತಿತ್ತು ಎಂಬುದಾಗಿಯೂ ಅವರು ತಿಳಿಸಿದ್ದಾರೆ.

"ವಾಜಪೇಯಿ ಅವರು ಕಾಗದ ಒಂದನ್ನು ತೆಗೆದು ತನ್ನ ಕೈಯಾರೆ ರಾಜೀನಾಮೆ ಪತ್ರ ಬರೆಯಲು ಆರಂಭಿಸಿದ್ದರು. ನಾನು ಅವರ ಕೈ ಹಿಡಿದೆ. ಅವರು ನನ್ನ ಮುಖವನ್ನೇ ನೋಡಿದರು. ನೀವೇನು ಮಾಡುತ್ತೀರಿ, ದಯವಿಟ್ಟು ಹೀಗೆ ಮಾಡಬೇಡಿ ಎಂದು ನಾನು ಅವರಿಗೆ ಹೇಳಿದ್ದೆ" ಎಂದು ಅವರು ಎನ್‌ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
• Play Free Online Games Click Here
• Blogs, Videos and More Click Here
• Send Musical and Animated Cards Click Here
• Simple,Fast & Free Email Service Click Here
ಸಂಬಂಧಿತ ಮಾಹಿತಿ ಹುಡುಕಿ