ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಧ್ಯಂತರ ಚುನಾವಣೆ: ಮುಖ್ಯಮಂತ್ರಿ ಸ್ಪಷ್ಟನೆ
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ತಾವು ಹೇಳಲೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ 8 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಜೆಡಿಎಸ್ ಜಯಗಳಿಸಬೇಕು ಎಂದು ಮಾತ್ರ ತಾವು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ರಾಜೀವ್ಗಾಂಧಿ ಜನ್ಮದಿನಾಚರಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಮಾತುಗಳನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಹೇಳಿದರು.

ಚಿಕ್ಕೌಡಿ ಜಿಲ್ಲಾ ರಚನೆ ಕುರಿತಂತೆ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದ ಅವರು ಆ ಭಾಗದ ಎಲ್ಲಾ ತಾಲೂಕುಗಳ ಜನರ ಅಭಿಪ್ರಾಯ ತಿಳಿದ ಬಳಿಕವಷ್ಟೇ ಸರ್ಕಾರ ಒಂದು ನಿರ್ಧಾರಕ್ಕೆ ಬರಲಿದೆ ಎಂದು ತಿಳಿಸಿದರು.
ಮತ್ತಷ್ಟು
ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಆದ್ಯತೆ: ಖರ್ಗೆ
ಕರ್ನಾಟಕದ ರಾಜ್ಯಪಾಲರಾಗಿ ಠಾಕೂರ್
ಹಿಮೊಫೀಲಿಯಾ ಚಿಕಿತ್ಸೆಗೆ 2 ಕೋಟಿ ರೂ.
ಕರ್ನಲ್ ವಸಂತ್ ಮನೆಗೆ ಜೆಜೆ ಸಿಂಗ್ ಭೇಟಿ
ಬಡಜನರ ಸೂರಿಗಾಗಿ 24 ಲಕ್ಷ ಮನೆ ನಿರ್ಮಾಣ
ಗೋಕಾಕ ಜಿಲ್ಲೆ ರಚನೆ ಹೋರಾಟ ಸ್ಥಗಿತ