ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯಪಾಲರ ನೇಮಕ: ಮುಖ್ಯಮಂತ್ರಿ ಅತೃಪ್ತಿ
ರಾಜ್ಯಪಾಲರ ನೇಮಕ ಕುರಿತಂತೆ ಕೇಂದ್ರ ಸರ್ಕಾರ ಮುಖ್ಯಮಂತ್ರಿಗಳ ಅಭಿಪ್ರಾಯವನ್ನೂ ಕೇಳಬಹುದಿತ್ತು. ಆದರೆ ಕೇಳಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುಲ್ಬರ್ಗಾ ಜಿಲ್ಲೆಯ ಹುಣಸಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯಪಾಲರನ್ನು ನೇಮಿಸುವಾಗ ಆ ರಾಜ್ಯದ ಮುಖ್ಯಮಂತ್ರಿಯನ್ನು ಕೇಳುವುದು ಸಂಪ್ರದಾಯವಾಗಬೇಕು. ಈ ಬಗ್ಗೆ ಹೆಚ್ಚಿಗೆ ಉತ್ತರ ನೀಡಲು ಅವರು ನಿರಾಕರಿಸಿದರು. ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ರಾಜ್ಯಪಾಲರ ನೇಮಕ ಆಗಿರುವುದು ಕಾಕತಾಳೀಯ ಎಂದು ವ್ಯಾಖ್ಯಾನಿಸಿದರು ಕುಮಾರಸ್ವಾಮಿ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆಯಿಲ್ಲ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿ ಈ ರೀತಿ ಕಾಂಗ್ರೆಸ್ ಪಕ್ಷದವರು ಕನಸು ಕಾಣುತ್ತಿದ್ದಾರೆ. ದಯವಿಟ್ಟು ಅಂತಹ ಕನಸನ್ನು ಬಿಟ್ಟುಬಿಡುವಂತೆ ಮನವಿ ಮಾಡಿದರು.


ಮತ್ತಷ್ಟು
ಸರ್ಕಾರ ರಚನೆ: ಧರಂಸಿಂಗ್ ಸ್ಪಷ್ಟನೆ
ಗುಲ್ಬರ್ಗಾ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಗ್ರಾಮವಾಸ್ತವ್ಯ
ದೇವರಾಜು ಅರಸು, ರಾಜೀವ್ ಗಾಂಧಿ ಜನ್ಮದಿನಾಚರಣೆ
ಮಧ್ಯಂತರ ಚುನಾವಣೆ: ಮುಖ್ಯಮಂತ್ರಿ ಸ್ಪಷ್ಟನೆ
ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಆದ್ಯತೆ: ಖರ್ಗೆ
ಕರ್ನಾಟಕದ ರಾಜ್ಯಪಾಲರಾಗಿ ಠಾಕೂರ್