ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರಸ್ವಾಮಿಗೆ ಸಿಂಧ್ಯ ಬೆಂಬಲಿಗರ ಬೆಂಬಲ
ಅನೂಹ್ಯ ಬೆಳವಣಿಗೆಯಲ್ಲಿ ಜೆಡಿಎಸ್ ನಿಂದ ಸದ್ಯದಲ್ಲೇ ಉಚ್ಛಾಟನೆಗೆ ಗುರಿಯಾಗಲಿರುವ ಪಿ.ಜಿ.ಆರ್.ಸಿಂಧ್ಯ ಅವರ ಬೆಂಬಲಿಗರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ಪ್ರಕಟಿಸಿದ್ದಾರೆ.

ಈ ಬೆಳವಣಿಗೆಯಿಂದ ಸಿಂಧ್ಯ ಅವರು ಏಕಾಂಗಿ ಯಾಗಲಿದ್ದಾರೆ ಎಂಬುದು ರಾಜಕೀಯ ಪರಿಣತರ ವಿಶ್ಲೇಷಣೆ.

ಸಿಂಧ್ಯ ಅವರು ಸದ್ಯದಲ್ಲೇ ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ತೆರಳಲಿರುವುದಾಗಿ ಪ್ರಕಟಿಸಿರುವ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಜೆಡಿಎಸ್ ಸಜ್ಜಾಗುತ್ತಿದೆ.
ಮತ್ತಷ್ಟು
ಸಡಗರ, ಸಂಭ್ರಮಗಳಿಂದ ಗೌರಿ ಹಬ್ಬ ಆಚರಣೆ
ಸಿಎಂಗೆ ಜನತೆಯ ಬೆಂಬಲ : ಮೆರಾಜುದ್ದೀನ್
ಸಿಎಂಗೆ ಶರದ್‌ ಪವಾರ್ ಸಲಹೆ
ಹಳೆಯ ಮೀಸಲು ನೀತಿ ಜಾರಿಗೆ ಆದೇಶ
ಅಬ್ಬರದ ಬೆಲೆಗಳ ನಡುವೆ ಗೌರಿ-ಗಣೇಶ ಹಬ್ಬ
ಸಾಲ ಮನ್ನಾ: ಜೆಡಿ( ಎಸ್) ಕಾರ್ಯಕ್ರಮ