ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಲಾವಿದರ ಹುಟ್ಟುಹಬ್ಬದ ಸಂಭ್ರಮ
ಇಂದು ಸೆಪ್ಟೆಂಬರ್ 18. ಇದಕ್ಕೊಂದು ವಿಶೇಷವಿದೆ. ಮೂವರು ಖ್ಯಾತ ತಾರೆಯರು ಅಭಿಮಾನಿಗಳ ನಡುವೆ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುಕೊಳ್ಳುತ್ತಿದ್ದಾರೆ.

ಮಂಗಳವಾರ ಹುಟ್ಟುಹಬ್ಬ ಆಚರಿಸುಕೊಳ್ಳುತ್ತಿರುವ ತಾರೆಯರೆಂದರೆ ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ಭಾವನಾತ್ಮಕ ತಾರೆ ಶೃತಿ. ತಮ್ಮ ಮನೆಯನ್ನು ಸುತ್ತುವರಿದ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸುವ ಮೂಲಕ ವಿಷ್ಣುವರ್ಧನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಕೊಂಡರು.
.
ಅದೇ ರೀತಿ ಉಪೇಂದ್ರ ಸಹಾ ಹುಟ್ಟು ಹಬ್ಬ ಆಚರಿಸಿಕೊಂಡರು. ತಮ್ಮ ಅಭಿಮಾನಿಗಳ ಹಾರೈಕೆಯೇ ತಮಗೆ ಶ್ರೀರಕ್ಷೆ ಎಂದು ಉಪೇಂದ್ರ ನುಡಿದರು.

ಇದು ತಮ್ಮ ಹುಟ್ಟು ಹಬ್ಬವಲ್ಲ, ಇದು ತಮ್ಮ ಅಭಿಮಾನಿಗಳ ಹುಟ್ಟುಹಬ್ಬ. ಅಭಿಮಾನಿಗಳು ಶುಭ ಹಾರೈಕೆಯಿಂದ ಪುಳಕಿತನಾಗಿರುವ ತಾನು ಇನ್ನುಮುಂದೆ ಅಭಿನಯದಲ್ಲಿ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಪರೀಶೀಲಿಸಿ ಅಭಿನಯಿಸುವುದಾಗಿ ಹೇಳಿದ್ದಾರೆ.

ತಮ್ಮ ಕುಟುಂಬ ಸದಸ್ಯರ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡ ತಾರೆ ಶೃತಿಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಮತ್ತಷ್ಟು
ಮಹತ್ವದ ಜೆಡಿಎಸ್ ಸಭೆ
ಸಿಎಂ ರಾಜೀನಾಮೆ ವದಂತಿ ?
ಸಾಂಕ್ರಾಮಿಕ ರೋಗಗಳ ತಡೆಗೆ ಸಿಬ್ಬಂದಿ ನೇಮಕ
ಮೈಸೂರಿಗೆ ಹೈಟೆಕ್ ಬಸ್‌
ಷರತ್ತನ್ನು ಉಲ್ಲಂಘಿಸಿದ ಮಿತ್ರಪಕ್ಷಗಳು
ಬಿಎಸ್ಪಿ ಪರವಾಗಿ ಸಿಂಧ್ಯ ಪ್ರಚಾರ