ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಾಂಗ್ರೆಸ್ ಮೇಲೆ ಹರಿಹಾಯ್ದ ಗೌಡ
ರಾಜ್ಯದಲ್ಲಿ ಸರ್ಕಾರ ರಚನೆಗೆ ಆವಕಾಶ ನೀಡದೆ ರಾಜ್ಯ ಪಾಲರ ಮೇಲೆ ಒತ್ತಡ ಹೇರಿ ವಿಳಂಬ ತಂತ್ರ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೇಸ್ ಪಕ್ಷದ ಕುಟಿಲ ನೀತಿಯ ವಿರುದ್ದ ಬಿಜೆಪಿ ತನ್ನ ಹೋರಾಟವನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ. ವಿಳಂಬ ತಂತ್ರವನ್ನು ಅನುಸರಿಸುವ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಯನ್ನು ಉಂಟುಮಾಡಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದ್ದಾರೆ,

ರಾಜ್ಯದ ಅಭಿವೃದ್ದಿಯ ಬಗ್ಗೆ ಅರಿವಿಲ್ಲದ ಜನರು ಜನತಾದರ್ಶನ ಸಚಿವ ಸಂಪುಟದಂತಹ ಸಭೆಗಳನ್ನು ನಡೆಸುತ್ತಿದ್ದಾರೆ ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ಅವರು ಪರೋಕ್ಷವಾಗಿ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯಪಾಲರ ಕಛೇರಿ ಕಾಂಗ್ರೆಸ್ ಕಛೇರಿಯಾಗಿ ಮಾರ್ಪಟ್ಟಿದೆ ಎಂದೂ ಅವರು ಹೇಳಿದರು.
ಮತ್ತಷ್ಟು
ಒಪ್ಪಂದಕ್ಕೆ ಒಪ್ಪಿಗೆ ಇಲ್ಲದಿದ್ದರೆ ಬೆಂಬಲವಿಲ್ಲ: ಜೆಡಿಎಸ್
ವಿಧಾನಸಭೆ ವಿಸರ್ಜನೆ:ಕೇಂದ್ರಕ್ಕೆ ನಿಯೋಗ
ಹೊಸ ಪರಿಸರ ಪ್ರವಾಸೋದ್ಯಮ ಯೋಜನೆ
ಹಂಪಿ ಉತ್ಸವಕ್ಕೆ ಚಾಲನೆ
ಅಧಿಕಾರ:ಶಬರಿ ಸ್ಥಾನದಲ್ಲಿ ಬಿಜೆಪಿ
ದೇವೇಗೌಡರ ಷರತ್ತುಗಳಿಗೆ ಬಿಜೆಪಿ ಉತ್ತರವಿಲ್ಲ