ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಿಜೆಪಿಗೆ ಬೆಂಬಲ ವಾಪಸ್ ಪಡೆಯಲು ಜೆಡಿಎಸ್ ವರಿಷ್ಠರ ಒತ್ತಡ
ಬಿಜೆಪಿಯ ಪಾಲಿಗೆ ಇಂದು ಕಹಿ ದೀಪಾವಳಿ. ನಿನ್ನೆಯವರೆಗೆ ಬಿಜೆಪಿಗೆ ಬೆಂಬಲವನ್ನು ನೀಡುತ್ತೇವೆ ಎಂದೇ ಹೇಳಿಕೊಂಡಿದ್ದ ಜೆಡಿಎಸ್ ದಿಢೀರನೇ ತನ್ನ ನಿಲುವಿನಲ್ಲಿ ಬದಲಾವಣೆ ತೋರಿಸಿದೆ.

ಮಾಜಿ ಪ್ರಧಾನಿ ದೇವೇಗೌಡ, ನೂತನ ಮೈತ್ರಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಹಠಾತ್ ಬೆಳವಣಿಗ ಬಿಜೆಪಿ ವಲಯ ಯಲ್ಲಿ ತಲ್ಲಣ ಉಂಟು ಮಾಡಿದೆ. ಪಕ್ಷದ ಎಲ್ಲ ಶಾಸಕರನ್ನು ಖುದ್ದು ಸಂಪರ್ಕಿಸುತ್ತಿರುವ ಗೌಡರು,ಬಿಜೆಪಿಗೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವ ಪ್ರಮಾಣ ಪತ್ರಕ್ಕೆ ಸಹಿಮಾಡುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಈ ನಡುವೆ ದೇವೇಗೌಡರ ಪುತ್ರ ರೇವಣ್ಣ, ಶ್ರವಣಬೆಳಗೊಳ ಶಾಸಕ ಸಿ.ಎಸ್. ಪುಟ್ಟೇಗೌಡ ಮತ್ತು ಪಾಂಡವಪುರ ಶಾಸಕ ಪುಟ್ಟರಾಜು ಮಾತ್ರ ಹೊಸ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದು, ಉಳಿದವರನ್ನು ಓಲೈಸುತ್ತಿದ್ದಾರೆ.

ಈ ನಡುವೆ ಬಹುತೇಕ ಜೆಡಿಎಸ್ ಶಾಸಕರು ಗೌಡರ ಕರೆಗೆ ಹೆದರಿ ಮೊಬೈಲ್ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮತ್ತಷ್ಟು
ರಾಷ್ಟ್ರಪತಿ ಆಳ್ವಿಕೆಗೆ ತೆರೆ;ಸರಕಾರ ರಚನೆಗೆ ಸಿದ್ದತೆ.
ಬಿಜೆಪಿಗೆ ಪಾಲಿಗೆ ಕಹಿ ದೀಪಾವಳಿಯೇ?
ಮಹಿಳಾ ಆಯೋಗದಲ್ಲಿ ಅನಗತ್ಯ ಹಸ್ತಕ್ಷೇಪ
ಹೊಸ ಮೈತ್ರಿ ಸರ್ಕಾರ ರಚನೆ ಸದ್ಯಕ್ಕಿಲ್ಲ
ನ್ಯಾಯಮೂರ್ತಿಗಳೊಂದಿಗೆ ರಾಜ್ಯಪಾಲರು ಸಮಾಲೋಚನೆ
ರಾಷ್ಟ್ರಪತಿಗಳ ಸಮ್ಮುಖದಲ್ಲಿ ಶಾಸಕರ ಯಶಸ್ವಿ ಪರೇಡ್