ಶಸ್ತ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಚತುರ್ಭುಜ ಲಕ್ಷಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸ್ಪರ್ಶ್ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಲಕ್ಷ್ಮಿಯ ಯಶಸ್ವೀ ಶಸ್ತ್ತ್ರ ಚಿಕಿತ್ಸೆ ನಡೆಸಿದ ಆಸ್ಪತ್ರೆಯ ಪದಾಧಿಕಾರಿಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು ಬಡತನದ ರೇಖೆಯಿಂದ ಬಂದ ಲಕ್ಷ್ಮಿಯ ಕುಟುಂಬಕ್ಕೆ ಸಹಾಯ ಧನವಾಗಿ 1 ಲಕ್ಷರೂಗಳನ್ನು ಸರ್ಕಾರದ ವತಿಯಿಂದ ಕೊಡುವುದಾಗಿಯೂ ಸಹ ಘೋಷಿಸಿದರು.
ಯಡಿಯೂರಪ್ಪನವರ ಜೊತೆ ಡಾ|| ವಿ.ಎಸ್. ಆಚಾರ್ಯರವರು ಸಹ ಅಸ್ಪತ್ರೆಗೆ ಭೇಟಿ ನೀಡಿದ್ದರು. 27 ಗಂಟೆಗಳ ಯಶಸ್ವೀ ಶಸ್ತ್ತ್ರ ಚಿಕಿತ್ಸೆಯ ನಂತರ ನೆಮ್ಮದಿಯುಸಿರು ಬಿಟ್ಟ ಲಕ್ಷ್ಮಿಯ ಕುಟುಂಬದವರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.
|