ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕುಮಾರನ ಮಾತಿಗೆ ಶತ-ಪಥ ತುಳಿದ ಯಡಿಯೂರಪ್ಪ
ನೆನ್ನೆ ತಾನೇ ತಾವು ಪ್ರಕಟಿಸಿದ ನಿರ್ಧಾರಕ್ಕೆ ವಿರುದ್ಧವಾಗಿ ಕುಮಾರಸ್ವಾಮಿ ಮಾಡಿರುವ ಟೀಕಾ ಪ್ರಹಾರಕ್ಕೆ ತತ್ತರಿಸಿರುವ ಯಡಿಯೂರಪ್ಪನವರು ವಿಶ್ವಾಸ ಮತ ಕೋರುವ ತನಕ ಇನ್ನು ಮುಂದೆ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳದಿರುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಇಂದು ಬೆಳಿಗ್ಗೆ ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಮ್ಮ ಎಂದಿನ ದೇವಸ್ಥಾನ ಯಾತ್ರೆಗಳನ್ನು ಮುಂದುವರಿಸುವುದಾಗಿ ತನ್ಮೂಲಕ ನೆಮ್ಮದಿಯ ಪಥ ತುಳಿಯುವುದಾಗಿ ಹೇಳಿದ್ದಾರೆ.

ತಮ್ಮ ಈ ನಿರ್ಧಾರಕ್ಕೆ ಯಾವುದೇ ರೀತಿಯ ಕಥೆ ಕಟ್ಟುವ ಅಗತ್ಯವಿಲ್ಲ ತಮ್ಮ ಮಿತ್ರ ಪಕ್ಷವಾದ ಜೆಡಿ(ಎಸ್) ಶಾಸಕರಿಗೆ ಯಾವ ರೀತಿಯಲ್ಲೂ ಮುಜುಗುರ ಆಗಬಾರದೆಂಬ ದೃಷ್ಟಿಯಿಂದ ಈ ನಿರ್ಧಾರ ತಳೆಯಲಾಗಿದೆ ಎಂದವರು ತಿಳಿಸಿದರು.
ಮತ್ತಷ್ಟು
ಲಕ್ಷ್ಮಿ ಕುಟುಂಬಕ್ಕೆ 1 ಲಕ್ಷ ರೂ ಸಹಾಯ
ಸಂಪುಟ ವಿಸ್ತರಣೆ ಬಳಿಕ ನಿಗಮ ಮಂಡಳಿಗಳಿಗೆ ನೇಮಕ
ಜೆಡಿಎಸ್ ಮುಖಂಡರಿಗೆ ಸಚಿವ ಆಕಾಂಕ್ಷಿಗಳ ಕಿರಿಕಿರಿ
ಯಡಿಯೂರಪ್ಪ ನಿರ್ಧಾರಗಳಿಗೆ ಜೆಡಿಎಸ್ ಕಿಡಿ
ನ.19ರಂದು ವಿಶ್ವಾಸ ಮತ ಕೋರಿಕೆ
20ರಂದು ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ