ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೃಷ್ಣರಾಜಸಾಗರ ಜಲಾಶಯ ಗರಿಷ್ಠ ಮಟ್ಟ
ನಾಡಿನ ಜೀವನದಿ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಜಲಾಶಯ ಗರಿಷ್ಠ ಮಟ್ಟ ತಲುಪಿ ನೀರು ಖಾಲಿ ಯಾಗದಂತೆ ನೀರಿನ ಸಂಗ್ರಹವಿದ್ದು, ಇಂದಿಗೆ (ನ.15) ನೂರುದಿನಗಳಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಅಪರೂಪದ ಸಂಗತಿ ಯಾಗಿದೆ.

ಕಾವೇರಿ ನೀರಿಗಾಗಿ ಕರ್ನಾಟಕ-ತಮಿಳುನಾಡಿನ ನಡುವೆ ವಿವಾದ ಮುಂದುವರೆಯುತ್ತಿರುವಾಗ ಇಂತಹದೊಂದು ಸಂಗತಿ ನಾಡಿನ ಜನರಿಗೆ ಖಷಿ ಕೊಟ್ಟಿದೆ. ಈ ಸಾಲಿನ ಆಗಸ್ಟ್ ಏಳರಂದು ತಲುಪಿದ ಜಲಾಶಯದ ಗರಿಷ್ಠ ನೀರಿನ ಮಟ್ಟವನ್ನು ಇಲ್ಲಿಯವರೆಗೆ ಇಳಿದಿಲ್ಲ.

ಕಳೆದ ವರ್ಷ ಇದೇ ದಿನಾಂಕದಂದು ಸಹಾ ಗರಿಷ್ಠ ಮಟ್ಟ ತಲುಪಿತ್ತು. ಕಳೆದ ಜೂನ್‌ನಿಂದ ತಮಿಳನಾಡಿಗೆ ಕಳೆದ ಜೂನ್‌ನಿಂದ ಈ ವರೆಗೆ ಕಾವೇರಿ ನ್ಯಾಯಮಂಡಳಿ ತೀರ್ಪಿನ ಆದೇಶದಂತೆ ನೀಡಬೇಕಾಗಿರುವ ನೀರಿನ ಪಾಲನ್ನು ಕಬಿನಿ ಮತ್ತು ಕಾವೇರಿ ಜಲಾಶಯದಿಂದ ಬಿಡಲಾಗಿದೆ.

ಇದಲ್ಲದೆ ಮೆಟ್ಟೂರು ಜಲಾಶಯ ಕೂಡ ಭರ್ತಿಯಾಗಿರುವುದರಿಂದ ಅಕ್ಟೋಬರ್-ನವೆಂಬರ್‌ನಿಂದಲೇ ನಿರಿನ ಬೇಡಿಕೆಯನ್ನು ಮುಂದಿರಿಸುತ್ತಿದ್ದ ತಮಿಳುನಾಡು ಈ ಬಾರಿ ನೀರು ಬೇಕೆಂದು ಇದುವರೆಗೆ ಚಕಾರವೆತ್ತಿಲ್ಲ.

ತಮಿಳುನಾಡು ಪ್ರದೇಶದಲ್ಲಿ ಸಹಾ ಸಮೃದ್ಧವಾಗಿ ಮಳೆಯಾಗಿರುವುದರಿಂದ ಈ ವರ್ಷ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.




ಮತ್ತಷ್ಟು
ಗೋಮಾತೆಗೆ 18ರಂದು ಕೋಟಿ ನೀರಾಜನ
ಬಹುಮತ ಸಾಬೀತು ಪಡಿಸಲು ವೇದಿಕೆ ಸಜ್ಜು
ಚೆಲುವರಾಯಸ್ವಾಮಿ ಮೇಲೆ ರೇವಣ್ಣ ಕೆಂಗಣ್ಣು
ಯಡಿಯೂರಪ್ಪ ವೇಗಕ್ಕೆ ಕುಮಾರ್ ಅಂಕುಶ
ರಾಜ್ಯಪಾಲರಿಗೆ ಕಾಂಗ್ರೆಸ್ ಒತ್ತಡ: ಡಿವಿಎಸ್ ಆರೋಪ
ಇಂದು ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ