ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿ(ಎಸ್) ಕಾರ್ಯಕರ್ತರಿಂದ ಶಕ್ತಿ ಪ್ರದರ್ಶನ
ವಿವಾದಗಳಿಂದ ರೋಸಿ ಹೋಗಿದ್ದ ಜೆಡಿ(ಎಸ್) ಬಣ ಇದೀಗ ತನ್ನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯೊಂದನ್ನು ಸಿದ್ಧಪಡಿಸಿಕೊಂಡಿದೆ.

ಇದೇ ತಿಂಗಳ 18ರಂದು ಸರ್ಕಾರಕ್ಕೆ ಜೆಡಿ(ಎಸ್) ಬಣದ ಶಾಸಕರು ಮಂತ್ರಿಗಳಾಗಿ ಸೇರ್ಪಡೆಯಾಗುವ ಸಂದರ್ಭದಲ್ಲಿ ಅಂದು ಸಂಜೆ ಅರಮನೆಯ ಗಾಯತ್ರಿ ವಿಹಾರ ಮೈದಾನದಲ್ಲಿ ಬೃಹತ್ ಸಭೆಯನ್ನು ಆಯೋಜಿಸಿದೆ.

ಆ ದಿನ ಲಕ್ಷಾಂತರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವ ನೀರೀಕ್ಷೆಯಿದೆ. ಈ ಸಭೆಯ ಮೂಲಕ ಪಕ್ಷದ ಜನಪರ ಕಾಳಜಿಯ ಯೋಜನೆಗಳನ್ನು ಜನರಿಗೆ ಮುಟ್ಟಿಸುವುದೇ ಮೂಲ ಉದ್ದೇಶವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮೆರಾಜುದ್ದೀನ್ ಹೇಳಿದ್ದಾರೆ.

ಸಮಾವೇಶಕ್ಕಾಗಿ ನಡೆಯುತ್ತಿರುವ ಸಿದ್ಧತೆಯನ್ನು ಇಂದು ಕುಮಾರಸ್ವಾಮಿ, ರೇವಣ್ಣ ಮತ್ತಿತರರು ವೀಕ್ಷಿಸಿದರು.
ಮತ್ತಷ್ಟು
ಶಾಸಕರ ಅನರ್ಹತೆ ನಾಳೆ ವಿಚಾರಣೆ
ಗಬ್ಬೆದ್ದು ಹೋದ ಹೆದ್ದಾರಿಗೆ ತೇಪೆ ಯೋಗ
ಡೀವಿಯನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದ ಧರಂ
ಸಚಿವ ಪದವಿ ಆಕಾಂಕ್ಷಿಗಳ ಚಟುವಟಿಕೆ ತೀವ್ರ
ಪ್ರಧಾನಿ ಬಳಿ ನೆರವು ಕೋರಿದ ಮುಖ್ಯಮಂತ್ರಿ
ಒಲ್ಲದ ಮದುವೆ: ಜೆಡಿಎಸ್ ಒಂದು ಕಣ್ಣು ಕಾಂಗ್ರೆಸ್‌ನತ್ತ