ದೇಶದ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾಭಾರತಿ ಬಿಜೆಪಿಗೆ ಮರಳಿದರೆ ಒಳಿತು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಸಲಹೆ ಮಾಡಿದ್ದಾರೆ.
ರಾಷ್ಟ್ರದಲ್ಲಿ ಅದರಲ್ಲೂ ಮುಖ್ಯವಾಗಿ ಗುಜರಾತಿನಲ್ಲಿ ರಾಷ್ಟ್ರೀಯ ಶಕ್ತಿಗಳು ಮತ್ತು ಹಿಂದುತ್ವ ಶಕ್ತಿಗಳ ನಡುವೆ ಘರ್ಷಣೆ ನಡೆಯುತ್ತಲೇ ಇದೆ. ಹಿಂದುತ್ವ ಶಕ್ತಿಗಳ ನಡುವೆ ಬಿರುಕು ಉಂಟಾದಲ್ಲಿ ಅದು ದೇಶದ ಸಮಗ್ರ ಹಿಂದುತ್ವ ಶಕ್ತಿಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ. ಇದನ್ನು ತಡೆಯಬೇಕೆಂದರೆ ನೀವು ಬಿಜೆಪಿಗೆ ಮರಳುವುದು ಒಳಿತು ಎಂದು ಉಮಾಭಾರತಿಯವರಿಗೆ ಪೇಜಾವರ ಶ್ರೀಗಳು ಸಲಹೆ ನೀಡಿದ್ದಾರೆ.
|