ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜೆಡಿಎಸ್ ಭಿನ್ನಮತೀಯ ಸಭೆಗೆ ಬಂಡೆಪ್ಪಾ,ಲಾಡ್
ಜೆಡಿಎಸ್‌ನಲ್ಲಿ ಗುಪ್ತಗಾಮಿನಿಯ ಸ್ವರೂಪದಲ್ಲಿರುವ ಭಿನ್ನಮತ ಈಗ ಸಮಾನ ಮನಸ್ಕ ಶಾಸಕರ ಸಭೆಯ ರೂಪದಲ್ಲಿ ಹೊರಹೊಮ್ಮಿದ್ದು, ಅದು ಕೈಗೊಳ್ಳುವ ನಿರ್ಧಾರದೆಡೆಗೆ ಎಲ್ಲರ ಕಣ್ಣು ನೆಟ್ಟಿದೆ.

ಎಂ.ಪಿ. ಪ್ರಕಾಶ್ ನೇತೃತ್ವದಲ್ಲಿ ಸಭೆ ಪ್ರಾರಂಭವಾಗಿದ್ದು ಅಲಂಗೂರು ಶ್ರೀನಿವಾಸ್, ಬಾಲಕೃಷ್ಣ, ಚಲುವರಾಯಸ್ವಾಮಿ, ಸೂರ್ಯನಾರಾಯಣ ರೆಡ್ಡಿ, ಬಂಡೆಪ್ಪ ಕಾಶೆಂಪುರ್, ಸಂತೋಷ್ ಲಾಡ್, ರಾಜಣ್ಣ ಹಾಗೂ ಬಿ.ಸಿ.ಪಾಟೀಲ್ ಇದರಲ್ಲಿ ಪಾಲ್ಗೊಂಡಿದ್ದಾರೆ.

ಸಭೆಯಲ್ಲಿ ಪಾಲ್ಗೊಳ್ಳಲು ಬಂದ ಶಾಸಕರಲ್ಲಿ ಒಬ್ಬರಾದ ಬಿ.ಸಿ.ಪಾಟೀಲರನ್ನು ಶಾಸಕರ ಮುಂದಿನ ಕ್ರಮದ ಕುರಿತು ಕೇಳಿದಾಗ, ಮುಂದೆ ಯಾವ ರೀತಿ ಹೆಜ್ಜೆ ಇಡಬೇಕೆಂಬುದರ ಕುರಿತು ಪರಸ್ಪರ ಚರ್ಚಿಸಲೆಂದೇ ಈ ಸಭೆ ಆಯೋಜಿಸಲಾಗಿದೆ ಎಂದು ನುಡಿದರು.
ಮತ್ತಷ್ಟು
ಭೂ ಒತ್ತುವರಿ: ಶೀಘ್ರ ಜಂಟಿ ಸಮಿತಿ ಅಂತಿಮ ವರದಿ ಸಲ್ಲಿಕೆ
ಬಗೆಹರಿಯದ ದೇವದಾಸಿಯರ ಸಮಸ್ಯೆಗಳು
ಗೋವಾ: ಕನ್ನಡ ಚಿತ್ರಗಳ ಪ್ರದರ್ಶನ
ಜೆಡಿಎಸ್ ಅತೃಪ್ತರಿಗೆ ಬಿಜೆಪಿ ಗಾಳ
ಜೆಡಿಎಸ್‌ಗೆ ದೇವೇಗೌಡರು ಅನಿವಾರ್ಯವಲ್ಲ
ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ