ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕನ್ನಡಕ್ಕೆ ದಕ್ಕದ ಸ್ಥಾನಮಾನ : ವಾಟಾಳ್ ಪ್ರತಿಭಟನೆ
ಕನ್ನಡ ಭಾಷೆಗೆ ಶಾಸ್ತ್ತ್ರೀಯ ಸ್ಥಾನಮಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದಕ್ಕಾಗಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ರಾಜಭವನದ ಮುಂದೆ ಪ್ರತಿಭಟನೆ ನಡೆಸಿದರು.

ಹಲವು ಬಾರಿ ಒತ್ತಾಯ ಮಾಡಿದಾಗಲೂ ಸಹ ಸಂಬಂಧಪಟ್ಟವರು ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಳ್ಳುತ್ತಿಲ್ಲ. ವಿನಾಕಾರಣ ವಿಳಂಬನೀತಿ ಅನುಸರಿಸಲಾಗುತ್ತಿದೆ. ಇದನ್ನು ಪ್ರತಿಭಟಿಸಲು ಇಂದು ಬೆಂಗಳೂರಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಾಟಾಳ್ ತಿಳಿಸಿದರು.

ಕರ್ನಾಟಕ ಅಭಿವೃದ್ದಿ, ಬೆಳವಣಿಗೆ ಹಾಗೂ ಅದರ ಕುರಿತಾದ ಚಿಂತನೆಗಳೆಡೆಗೆ ಗಮನ ಸೆಳೆಯಲು ಇಂದಿನಿಂದ ಪ್ರಾರಂಭವಾಗಿ ಜನವರಿ 27ರವರೆಗೆ ರಾಜ್ಯಾದ್ಯಂತ ಚಳವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದೂ ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ತಿಳಿಸಿದರು.
ಮತ್ತಷ್ಟು
ಮರಳಿ ಬನ್ನಿ : ಪ್ರಕಾಶ್‌ಗೆ ಜೆಡಿ(ಯು) ಆಹ್ವಾನ
ರಾಜಕೀಯ ಸಿನಿಮಾ ಅಲ್ಲ: ಎಂ.ಪಿ.ಪ್ರಕಾಶ್
ಸಂಚಾರ ದಟ್ಟಣೆ ಕಡಿವಾಣಕ್ಕೆ ವಿನೂತನ ಕ್ರಮ
ಅಂತಾರಾಷ್ಟ್ತ್ರೀಯ ವಿಮಾನನಿಲ್ದಾಣಕ್ಕೆ ರಸ್ತೆಸೌಲಭ್ಯ
ಸರ್ಕಾರದ ಮುಖ್ಯ ಕಾರ್ಯದರ್ಶಿ ಬದಲಾವಣೆ
ಹೊಸ ರೂಪು ತಾಳಿದ ಉಡುಪಿ ಶ್ರೀಕೃಷ್ಣ ಪರ್ಯಾಯ ವಿವಾದ