ಒಂದು ಕಾಲಕ್ಕೆ ಒಂದೇ ಮೂಲಕ್ಕೆ ಸೇರಿದ್ದ ಜನತಾಪಕ್ಷ ಹಾಗೂ ಬಿಜೆಪಿ ಮತ್ತೆ ಒಂದಾಗಲಿವೆಯೇ? ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದರೆ ಆ ದಿನಗಳೂ ದೂರವಿಲ್ಲ ಎನಿಸುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಜನತಾ ಪಕ್ಷದ ಮುಖಂಡ ಡಾ|| ಸುಬ್ರಮಣಿಯನ್ ಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.
ಪ್ರಸಕ್ತ ರಾಜಕೀಯ ವಿದ್ಯಮಾನಗಳು ಈ ಚರ್ಚೆಯಲ್ಲಿ ಹಾದುಹೋಗಿದ್ದು ಪಕ್ಷ ವೀಲೀನದೆಡೆಗೆ ಸಹಮತ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ತಾವೂ ಸಹ ಮೂಲತಃ ಜನಸಂಘದವರೇ ಅಗಿದ್ದು ಜನತಾಪಕ್ಷ ಹಾಗೂ ಬಿಜೆಪಿಯ ತತ್ವ ಸಿದ್ದಾಂತಗಳಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಹೀಗಾಗಿ ವೀಲೀನ ಕಷ್ಟವಾಗಲಾರದು ಎಂಬ ಅಭಿಮತವನ್ನು ಡಾ|| ಸ್ವಾಮಿ ಸುದ್ದಿಗಾರರೊಂದಿಗೆ ವ್ಯಕ್ತಪಡಿಸಿದ್ದಾರೆ.
|