ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಕೆಟ್ ಹಂಚಿಕೆಯಲ್ಲಿ ಕೇಂದ್ರದ ಹಸ್ತಕ್ಷೇಪವಿಲ್ಲ: ಯಡಿಯೂರಪ್ಪ
ರಾಜ್ಯ ಬಿಜೆಪಿ ನಾಯಕರಲ್ಲಿ ಭಿನ್ನಮತ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪಕ್ಷದ ಕೇಂದ್ರ ಘಟಕವೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಮಾಡಲಿದೆ ಎಂಬ ವರದಿಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಳ್ಳಿಹಾಕಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರು ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ, ತಮಗೆ ಅಸೆಂಬ್ಲಿ ಹಾಗೂ ಲೋಕಸಭೆ ಎರಡೂ ಮುಖ್ಯ. ಪಕ್ಷದ ಈಗಿನ ಸಂಸದರಾರೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಘಟಕವೇ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದು ನುಡಿದ ಯಡಿಯೂರಪ್ಪ ತಮ್ಮ ಪಕ್ಷಕ್ಕೆ ಅನುಕಂಪದ ಅಗತ್ಯವಿಲ್ಲ. ಜನಪರ ಕಾಳಜಿಗಳನ್ನು ಮುಂದಿಟ್ಟುಕೊಂಡೇ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಮತ್ತಷ್ಟು
ಕೃಷ್ಣ ಬಂದರೆ ಸ್ವಾಗತ: ಧರಂಸಿಂಗ್
ನಮ್ಮ ಪ್ರಾಬಲ್ಯ ಮುರಿಯಲಾಗದು: ಕುಮಾರಸ್ವಾಮಿ
ಬಿಜೆಪಿ ಬಸ್ಸಿಗೆ ಕುಮಾರಣ್ಣ ರೆಡ್ ಸಿಗ್ನಲ್..!
ಸಾಗರೋಲ್ಲಂಘನಕ್ಕೆ ವಿರೋಧವಿಲ್ಲ: ಪೇಜಾವರ ಶ್ರೀ
ಆನೇಕಲ್‌ನಲ್ಲಿ ಆನೆ ಬಂತೊಂದಾನೆ...!
ಯಡ್ಡಿ ಅವ್ಯವಹಾರ ಸಾಬೀತುಪಡಿಸಲಿ: ರೇವಣ್ಣ ಗುಡುಗು