ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಪ್ಪ-ಮಕ್ಕಳ ಪಕ್ಷದಲ್ಲಿ ಇರಲಾರೆ: ಪ್ರಕಾಶ್
ನನ್ನೆದುರು ಜೆಡಿಯು, ಬಿಎಸ್ಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಹ್ವಾನವಿದೆ. ಇವುಗಳಲ್ಲೊಂದನ್ನು ಆಯ್ಕೆ ಮಾಡುತ್ತೇನೆಯೇ ವಿನಃ ಅಪ್ಪ-ಮಕ್ಕಳ ಪಕ್ಷದಲ್ಲಿ ಇನ್ನು ಇರಲಾರೆ - ಇದು ಬಂಡಾಯ ನಾಯಕ ಎಂ.ಪಿ.ಪ್ರಕಾಶರ ಸ್ಪಷ್ಟ ನುಡಿ.

ತಮ್ಮ ಬೆಂಬಲಿಗರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಈ ತಿಂಗಳ 12ರ ನಂತರ ನನ್ನ ಅಂತಿಮ ನಿರ್ಧಾರ ತಿಳಿಸುವೆ ಎಂದರು.

ದೇವೇಗೌಡರು ಹಾಗೂ ಅವರ ಪುತ್ರರು ಮಾಡಿದ ನಂಬಿಕೆ ದ್ರೋಹವೇ ಇನ್ನೂ ಹಸಿರಾಗಿದೆ. ಹೀಗಿರುವಾಗ, ಪ್ರಕಾಶ್‌ರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಪ್ರಯತ್ನಿಸುತ್ತೇವೆ ಎಂಬ ಅವರ ಮಾತನ್ನು ಹೇಗೆ ನಂಬುವುದು. ಈಗ ಅನುಭವಿಸಿರುವುದೇ ಸಾಕಾಗಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.

ಲಿಂಗಾಯಿತ ಜನಾಂಗದ ಕುರಿತು ಹಾಗೂ ಮಠಾಧೀಶರ ಕುರಿತು ಜೆಡಿಎಸ್ ಮುಖಂಡರಿಂದ ವ್ಯಕ್ತವಾಗಿರುವ ನಡವಳಿಕೆಗಳು ಮುಂದಿನ ಚುನಾವಣೆಯಲ್ಲಿ ಪ್ರಭಾವ ಬೀರುವುದರಿಂದ ಪ್ರಕಾಶ್ರ ಮುಂದಿನ ಹೆಜ್ಜೆ ಯಾವುದು ಎಂಬುದೇ ಈಗ ಕುತೂಹಲವನ್ನುಂಟುಮಾಡಿದೆ.
ಮತ್ತಷ್ಟು
ಸುಗುಣೇಂದ್ರರಿಗೆ ಪೇಜಾವರರಿಂದ ಪಂಥಾಹ್ವಾನ
ಚನ್ನಪಟ್ಟಣದಿಂದ ಸ್ಪರ್ಧಿಸಲು ಕುಮಾರಣ್ಣ ಒಲವು?
ಮುಖ್ಯಮಂತ್ರಿ ಐ ಲವ್ ಯೂ ಚಿತ್ರಕ್ಕೆ ಪ್ರತಿಭಟನೆ
ಜೆಡಿಎಸ್ ಕೊಳೆತು ನಾರುತ್ತಿದೆ: ಸಿಂಧ್ಯಾ
ಟಿಕೆಟ್ ಹಂಚಿಕೆಯಲ್ಲಿ ಕೇಂದ್ರದ ಹಸ್ತಕ್ಷೇಪವಿಲ್ಲ: ಯಡಿಯೂರಪ್ಪ
ಕೃಷ್ಣ ಬಂದರೆ ಸ್ವಾಗತ: ಧರಂಸಿಂಗ್