ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಭವ್ಯತೆಯ ಮೆರುಗು
ದೀಪವನ್ನು ಬೆಳಗುವಾಗ ಶತ್ರು ಬುದ್ದಿ ವಿನಾಶಾಯ ದೀಪ ಜ್ಯೋತಿ ನಮೋಸ್ತುತೇ ಎಂದು ಹೇಳುವುದು ಭಾರತೀಯರ ಉದಾತ್ತ ಚಿಂತನೆಯನ್ನು ಬಿಂಬಿಸುತ್ತದೆ. ಇದು ಮತ್ತೊಮ್ಮೆ ಅನುಭವಕ್ಕೆ ಬಂದಿದ್ದು ಧರ್ಮಸ್ಥಳದಲ್ಲಿ.

ಖ್ಯಾತ ನೃತ್ಯಗಾತಿ ಹಾಗೂ ಸಂಗೀತ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಪಧ್ಮಭೂಷಣ ಡಾ||ಸೋನಾಲ್ ಮಾನ್ಸಿಂಗ್‌ರ ವರು ಇಲ್ಲಿ ನಡೆಯುತ್ತಿರುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದಲ್ಲಿ ಅಮೃತ ಮಹೋತ್ಸವ ಭವನವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ, ಈ ದೀಪವು ನಮ್ಮೆಲ್ಲರ ಹೃದಯ, ಮನಸ್ಸು ಹಾಗೂ ಆಶಯಗಳಲ್ಲಿ ಅಮೃತವರ್ಷಿಣಿ ಗಂಗೆಯನ್ನು ಹರಿಸಲಿ ಎಂದದ್ದು ಸಂದರ್ಭೋಚಿತವಾಗಿತ್ತು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ|| ವೀರೇಂದ್ರ ಹೆಗ್ಗಡೆಯವರು, ನಿರಂತರ ಮಳೆಯ ನಡುವೆಯೂ ಕೇವಲ 55 ದಿನಗಳಲ್ಲಿ ನಿರ್ಮಿಸಲಾಗಿರುವ ಈ ಭವನದಲ್ಲಿ 3,000 ಜನಗಳು ಕುಳಿತುಕೊಳ್ಳಬಹುದಾಗಿದೆ ಎಂದರು.

ಈ ಭವನವನ್ನು ಉದ್ಘಾಟಿಸುವುದಕ್ಕೆ ಮುಂಚೆ ವಾದ್ಯದ ಮೇಳ, ಅದನ್ನು ಹಿಂಬಾಲಿಸಿಕೊಂಡು ಬರುವ, ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಲಶ ಹಿಡಿದ ಹುಡುಗಿಯರ ದಂಡು ವೇದಿಕೆಗೆ ಬಂದಿದ್ದು ಸಭೆಗೆ ಒಂದು ಭವ್ಯ-ದಿವ್ಯ ಆಯಾಮವನ್ನು ನೀಡಿತ್ತು.
ಮತ್ತಷ್ಟು
ಧರ್ಮಸ್ಥಳದಲ್ಲಿ ರಾಜ್ಯಮಟ್ಟದ ಪ್ರದರ್ಶನ ಮೇಳದ ಉದ್ಘಾಟನೆ
ಅಪ್ಪ-ಮಕ್ಕಳ ಪಕ್ಷದಲ್ಲಿ ಇರಲಾರೆ: ಪ್ರಕಾಶ್
ಸುಗುಣೇಂದ್ರರಿಗೆ ಪೇಜಾವರರಿಂದ ಪಂಥಾಹ್ವಾನ
ಚನ್ನಪಟ್ಟಣದಿಂದ ಸ್ಪರ್ಧಿಸಲು ಕುಮಾರಣ್ಣ ಒಲವು?
ಮುಖ್ಯಮಂತ್ರಿ ಐ ಲವ್ ಯೂ ಚಿತ್ರಕ್ಕೆ ಪ್ರತಿಭಟನೆ
ಜೆಡಿಎಸ್ ಕೊಳೆತು ನಾರುತ್ತಿದೆ: ಸಿಂಧ್ಯಾ