ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಡೇಜಾ ರವಿ ಕಗ್ಗೊಲೆ
ಚೀರನಹಳ್ಳಿ ಶಂಕರ್ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಮಂಡ್ಯ ನಗರಸಭೆ ಸದಸ್ಯ ಜಡೇಜಾ ರವಿಯವರ ಕಗ್ಗೊಲೆಯಾಗಿದೆ.

ಇಂದು ಬೆಳಗ್ಗೆ 11.30ರ ಸುಮಾರಿಗೆ ಎಲಿಯೂರ್ ಗೇಟ್ ಬಳಿ ಈ ದುಷ್ಕ್ಕತ್ಯ ಸಂಭವಿಸಿದ್ದು, ಟಾಟಾ ಸುಮೋದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ತ್ರಗಳಿಂದ ರವಿಯ ಮೇಲೆ ಹಲ್ಲೆ ಮಾಡಿ, ಕೈ ಕತ್ತರಿಸಿ ಅದನ್ನು ಚೀರನಹಳ್ಳಿ ಶಂಕರ್ ಸಮಾಧಿ ಬಳಿ ಇಟ್ಟು ಪೂಜೆ ಮಾಡಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಕೊಲೆ ಮಾಡಿದ ನಂತರ ಟಾಟಾ ಸುಮೋದ ಬದಲಿಗೆ ಜಡೇಜಾ ರವಿಯ ಕಾರಿನಲ್ಲೇ ದುಷ್ಕರ್ಮಿಗಳು ಪರಾರಿಯಾಗಿರುವುದು ಅಚ್ಚರಿ ಹುಟ್ಟಿಸಿದೆ.

ರೌಡಿ ಪಟ್ಟಿಯಲ್ಲಿ ಜಡೇಜಾ ರವಿಯ ಹೆಸರಿದ್ದು ಆತ ಭೂಗತ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದ. ಈ ಕೃತ್ಯದಲ್ಲಿ ಜಡೇಜಾ ರವಿಯ ಸಹಚರರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಅಕ್ಷರ ದಾಸೋಹ ಯೋಜನೆಗೆ ಮಠಗಳೇ ಸ್ಪೂರ್ತಿ: ಕೃಷ್ಣ
ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಭವ್ಯತೆಯ ಮೆರುಗು
ಧರ್ಮಸ್ಥಳದಲ್ಲಿ ರಾಜ್ಯಮಟ್ಟದ ಪ್ರದರ್ಶನ ಮೇಳದ ಉದ್ಘಾಟನೆ
ಅಪ್ಪ-ಮಕ್ಕಳ ಪಕ್ಷದಲ್ಲಿ ಇರಲಾರೆ: ಪ್ರಕಾಶ್
ಸುಗುಣೇಂದ್ರರಿಗೆ ಪೇಜಾವರರಿಂದ ಪಂಥಾಹ್ವಾನ
ಚನ್ನಪಟ್ಟಣದಿಂದ ಸ್ಪರ್ಧಿಸಲು ಕುಮಾರಣ್ಣ ಒಲವು?