ಸದ್ಯದಲ್ಲಿಯೇ ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಚುರುಕುತನವನ್ನು ತೋರಿಸಿದೆ.
ಇದರ ಮೊದಲ ಹಂತವಾಗಿ ಜನಾಂದೋಲನ ಯಾತ್ರೆಯನ್ನು ಪಕ್ಷ ಹಮ್ಮಿಕೊಂಡಿದ್ದು, ಬೆಂಗಳೂರಿನಿಂದ ಪ್ರಾರಂಭವಾದ ಈ ಯಾತ್ರೆ ಈಗಾಗಲೇ ಚಿತ್ರದುರ್ಗವನ್ನು ಸಮೀಪಿಸಿದೆ. ಎರಡನೇ ಹಂತದ ಯಾತ್ರೆ ಇದೇ ತಿಂಗಳ 17ರಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಧರಂಸಿಂಗ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ಅಧಿಕಾರಾವಧಿಯಲ್ಲಿ ಹೀಗೆ ಕಿತ್ತಾಟ ಮಾಡಲಿಲ್ಲ. ಅಧಿಕಾರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇವೆ. ಕಾಂಗ್ರೆಸ್ಗೆ ಮತಹಾಕುವುದರ ಮೂಲಕ ಸಮರ್ಥ ಸರ್ಕಾರವನ್ನು ನೀಡಲು ನೆರವಾಗಿ ಎಂದು ಮತದಾರರ ಮುಂದೆ ಭಿನ್ನವಿಸಿಕೊಳ್ಳುವುದು ತಮ್ಮ ಉದ್ದೇಶ ಎಂದು ಧರಂಸಿಂಗ್ ಈ ಸಂದರ್ಭದಲ್ಲಿ ನುಡಿದಿದ್ದಾರೆ.
|