ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೇವಣ್ಣರಿಗೆ ಚಳಿಜ್ವರ ಬಂದಂತಿದೆ: ಡಿವಿ
'ರೇವಣ್ಣ ನನ್ನನ್ನು ಯಡಿಯೂರಪ್ಪನವರ ಹೆಡ್ ಕ್ಲರ್ಕ್ ಎಂದು ಗೇಲಿ ಮಾಡಿದ್ದಾರೆ. ಪಕ್ಷದ ಒಳಿತಿಗಾಗಿ ಹೆಡ್ ಕ್ಲರ್ಕೇ ಏಕೆ, ಸಾಮಾನ್ಯ ಸೇವಕನಾಗಲೂ ನಾನು ಸಿದ್ಧ' ಎಂದು ಪ್ರತಿಕ್ರಿಯಿಸುರವ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದ ಗೌಡರು, ಮಾಜಿ ಸಚಿವ ರೇವಣ್ಣನವರಿಗೆ ಚಳಿಜ್ವರ ಬಂದಂತಿದೆ; ಅದಕ್ಕೇ ಏನೇನೋ ಕನವರಿಸುತ್ತಿದ್ದಾರೆ ಎಂಬ ಮಾತಿನ ಚಾಟಿ ಬೀಸಿದ್ದಾರೆ.

ಮಲ್ಲೇಶ್ವರದ 18ನೇ ಅಡ್ಡರಸ್ತೆಯ ಬಸ್ ನಿಲ್ದಾಣದ ಸಮೀಪ ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಸದಸ್ಯತ್ವ ನೋಂದಣೆ ಅಭಿಯಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಗೌಡರು, ದೇವೇಗೌಡರ ಕುಟುಂಬ ರಾಜಕಾರಣದ ಯುಗ ಅಂತ್ಯವಾಗಿರುವುದನ್ನು ಮನಗಂಡಿರುವ ರೇವಣ್ಣ ಗಲಿಬಿಲಿಗೊಂಡು ಹೀಗೆಲ್ಲ ಮಾತನಾಡಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ಮುಂಬರಲಿರುವ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದೂ ಸಹ ಸದಾನಂದ ಗೌಡರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
'ಸೈಕಲ್' ದಳದ ಹೊರಟ್ಟಿಗೆ ಸಂಬಂಧಿಸಿದ್ದು: ಯಡಿಯೂರಪ್ಪ
ಕೃಷ್ಣ ಬಂದರೆ ಬರಲಿ: ಖರ್ಗೆ
ಮಂಗಳೂರು ಬೆಂಗಳೂರು ರೈಲು ಮಾರ್ಗ ಆರಂಭ
ಕಾರು ಡಿಕ್ಕಿ: ಬೆಂಗಳೂರಿನ 7 ಮಂದಿ ನಿಧನ
ಕಾಂಗ್ರೆಸ್‌ನಿಂದ ಜನಾಂದೋಲನ ಯಾತ್ರೆ
ಜಡೇಜಾ ರವಿ ಕಗ್ಗೊಲೆ