ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಸಂಧಾನ ಫಲ ನೀಡಿದ್ದು ಬಂಡಾಯವೆದ್ದಿದ್ದ ಚೆಲುವರಾಯಸ್ವಾಮಿ ಬಣ ಜೆಡಿಎಸ್ನಲ್ಲಿಯೇ ಉಳಿಯುವಂತಾಗಿದೆ.
ಈ ಹಿಂದೆ ಕೊಂಚ ಅಸಮಾಧಾನಗೊಂಡು ಎಂ.ಪಿ.ಪ್ರಕಾಶ್ರೊಂದಿಗೆ ಗುರುತಿಸಿಕೊಂಡಿದ್ದ ಚೆಲುವರಾಯಸ್ವಾಮಿ ಬಣ ಪಕ್ಷ ಬಿಡಲಿದೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು.
ಇರಬಹುದಾದ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುವುದಾಗಿ ಈ ಬಣ ಹೇಳಿಕೆ ನೀಡಿದೆ.
ಪಕ್ಷದಿಂದ ದೂರವಿದ್ದಷ್ಟು ಕಾಲವೂ ತಾವು ಯಾವ ನಾಯಕರ ವಿರುದ್ಧವೂ ಹೋರಾಟ ನಡೆಸಿಲ್ಲ. ಪ್ರಕಾಶ್ರವರ ಮನವೊಲಿಕೆಗಾಗಿ ಪ್ರಯತ್ನಿಸಲಾಗುತ್ತಿದೆ. ಅವರು ಪಕ್ಷದಲ್ಲಿಯೇ ಉಳಿಯುತ್ತಾರೆ ಎಂಬ ವಿಶ್ವಾಸ ತಮ್ಮದು ಎಂದು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
|