ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆಪಿಸಿಸಿ ಪುನರಚನೆ ಇಲ್ಲ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಬದಲಾವಣೆ ಸದ್ಯಕ್ಕಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌವಾಣ್ ಹೇಳಿದ್ದು, ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಸದ್ಯಕ್ಕೆ ಮುಂದುವರಿಯಲಿದ್ದಾರೆ.

ಇದರಿಂದಾಗಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ರಾಜ್ಯ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ದಟ್ಟ ವದಂತಿಗಳಿಗೆ ಸದ್ಯಕ್ಕೆ ತೆರೆಬಿದ್ದಂತಾಗಿದೆ.

ಏತನ್ಮಧ್ಯೆ, ಕಾಂಗ್ರೆಸ್‌ಗೆ ಹೊಸಬರನ್ನು ಸೇರಿಸುವ ಕುರಿತಂತೆ ಅವಸರ ಪಡಬಾರದೆಂದೂ ರಾಜ್ಯ ನಾಯಕರಿಗೆ ಆದೇಶ ನೀಡಿದ್ದಾರೆನ್ನಲಾಗಿದೆ.

"ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಬದಲಾಯಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಅಂತಹ ಚಿಂತನೆ ಸದ್ಯಕ್ಕಿಲ್ಲ. ಪಕ್ಷವನ್ನು ಚುನಾವಣೆಗೆ ಅಣಿಗೊಳಿಸುವುದಕ್ಕೆ ಪ್ರಥಮ ಆದ್ಯತೆ" ಎಂದು ಚೌವಾಣ್ ಪತ್ರಿಕಾಗೋಷ್ಠಿಯಲ್ಲಿ ನುಡಿದರು.
ಮತ್ತಷ್ಟು
ಪ್ರಕಾಶ್ ತೊರೆದ ಕಾರಣ ನಾಳೆ ಬಹಿರಂಗ: ಕುಮಾರಸ್ವಾಮಿ
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಆಸ್ಕರ್‌ಗೆ ಮುತ್ತಿಗೆ
ಮಳಿಗೆಯಲ್ಲಿ ಪ್ರತ್ಯಕ್ಷವಾದ ಆನುದೇವಾ...
ಪ್ರಕಾಶ್ ಕಾಂಗ್ರೆಸ್‌ಗೆ?:ಮೊಯ್ಲಿ ಜತೆ ಮಾತುಕತೆ
ಪುತ್ತಿಗೆ ಶ್ರೀಗಳದು ಅನನ್ಯ ರೀತಿಯ ಧರ್ಮಪ್ರಚಾರ
ಗೊಂದಲಗಳಿಗೆ ಸದ್ಯದಲ್ಲಿಯೇ ತೆರೆ: ಪುತ್ತಿಗೆ ಶ್ರೀ