ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೋಭಾಯಾತ್ರೆ: ಕೇಸರಿಮಯವಾದ ಮಲೆನಾಡು
ಮಲೆನಾಡಿನ ಮಡಿಲೂರು-ಚಿಕ್ಕಮಗಳೂರು ಇಂದು ಅಕ್ಷರಶಃ ಕೇಸರಿಮಯವಾಗಿದೆ. ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆಯೊಂದಿಗ ಶೋಭಾಯಾತ್ರೆ ನಡೆಯುತ್ತಿದ್ದು ಹಲವು ಹನ್ನೊಂದು ಊರುಗಳಿಂದ ಬಂದಿರುವ ಉತ್ಸಾಹಿಗಳಿಂದ ತುಂಬಿದೆ ಈ ಊರು.

ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಈ ಶೋಭಾಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ದೇಶದೆಲ್ಲೆಡೆಯ ಮುಖಂಡರು, ಭಕ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯದಲ್ಲಿಯೇ ರಥಯಾತ್ರೆ ಪ್ರಾರಂಭವಾಗಲಿದ್ದು ಈ ಸನ್ನಿವೇಶವನ್ನು ನೆನಪಿನಲ್ಲುಳಿಸಲು ಊರಿನೆಲ್ಲೆಡೆ ಭಗವದ್ ಧ್ವಜ-ಬಂಟಿಂಗ್‌ಗಳನ್ನು ಲಗತ್ತಿಸಲಾಗಿದೆ.

ಶೋಭಾಯಾತ್ರೆಗೆ ಧಾರ್ಮಿಕ-ಸಾಂಸ್ಕ್ಕತಿಕ ಆಯಾಮವನ್ನು ನೀಡುವ ಉದ್ದೇಶದಿಂದ ಸಾಂಸ್ಕ್ಕತಿಕ ಕಲಾತಂಡಗಳಿಗೆ ಈ ಯಾತ್ರೆಯಲ್ಲಿ ಅವಕಾಶ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ಖ್ಯಾತರಾದ ಧಾರ್ಮಿಕ ಮುಖಂಡ ರವೀಶ್ ತಂತ್ರಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವುದು ಮತ್ತೊಂದು ವಿಶೇಷ. ಇವರೊಂದಿಗೆ ಕೇಶವ ಹೆಗಡೆ, ಮಾಜಿ ಸಚಿವ ನಾಗರಾಜ ಶೆಟ್ಟಿ, ಸ್ಥಳೀಯ ಮುಖಂಡರು-ಸ್ವಾಮೀಜಿಗಳು ರಥಯಾತ್ರೆಯ ಅಂಗವಾಗಲಿದ್ದಾರೆ.

ಹಲವು ವರ್ಷಗಳಿಂದ ದತ್ತಪೀಠ ಅಸ್ತಿತ್ವದಲ್ಲಿದ್ದರೂ ಹೋರಾಟದ ಹಾದಿ ಹಿಡಿಯುವ ತನಕ ಅದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈಗ ದತ್ತಪೀಠದ ಹಕ್ಕನ್ನು ಪಡೆಯಲು ಹೋರಾಟ ನಡೆಸಬೇಕು. ಈ ನಿಟ್ಟಿನಲ್ಲಿ ಯುವಕರಲ್ಲಿ ಜಾಗೃತಿ ಮೂಡಬೇಕು ಎಂದು ದೂರದ ಲಕ್ನೊದಿಂದ ಬಂದಿದ್ದ ಕನ್ನಡದ ಧಾರ್ಮಿಕ ಮುಖಂಡರೊಬ್ಬರು ಕರೆ ಕೊಟ್ಟಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಮತ್ತಷ್ಟು
ರೈತರ ಆತ್ಮಹತ್ಯೆ ತಡೆಗೆ ರವಿಶಂಕರ್ ಸೂತ್ರ
ಸಿದ್ದರಾಜು ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ
ಶೋಭಾಯಾತ್ರೆಗೆ ಅವಕಾಶ
ಸಂಭ್ರಮದ ಬಕ್ರೀದ್ ಆಚರಣೆ
ಶೋಭಾಯಾತ್ರೆಗೆ ಕೋ. ಸೌ.ವೇದಿಕೆ ಖಂಡನೆ
ನಲುಗುತ್ತಿರುವ ವೀರಶೈವ ಧರ್ಮ:ಅನಂತಮೂರ್ತಿ