ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲೂ ಕನ್ನಡಿಗರ ಕ್ಷಮೆಯಾಚಿಸಲಿ :ಕುಮಾರ್
ಕನ್ನಡಿಗರನ್ನು ಅವಮಾನಿಸಿರು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯೂದವ್ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕನ್ನಡಿಗರ ಬಗ್ಗೆ ಅವ್ಯಾಚ್ಯ ಶಬ್ದದಿಂದ ಮಾತನಾಡಿರುವ ಸಚಿವರು ಕನ್ನಡದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಬಿಹಾರಿ ಸಂಸ್ಕೃತಿಯನ್ನು ಕನ್ನಡದ ಜನತೆ ಮೇಲೆ ಲಾಲೂ ಪ್ರಸಾದ್ ತೋರಿಸುವುದು ಬೇಡ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಚಿವರು ಕನ್ನಡಿಗರಿಗೆ ಉಪದೇಶ ನೀಡುವ ಅಗತ್ಯವಿಲ್ಲ. ಕನ್ನಡಿಗರ ಬಗ್ಗೆ ಕೀಳುಮಟ್ಟದ ಮನೋಭಾವವನ್ನು ಸೃಷ್ಟಿಸಿರುವ ಸಚಿವರು ಕನ್ನಡ ಜನತೆಯ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದರು.

ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಲಾಲೂ ಪ್ರಸಾದ್ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆಯನ್ನು ನಡೆಸಿದರು. ಲಾಲೂ ವಿರುದ್ಧ ಘೋಷಣೆಯನ್ನು ಕೂಗಿ, ಲಾಲೂ ಪ್ರತಿಕೃತಿಯನ್ನು ದಹಿಸಲಾಯಿತು.
ಮತ್ತಷ್ಟು
ಫೆ.14ಕ್ಕೆ ಚಿತ್ರೋದ್ಯಮ ಬಂದ್
ಬೇಗ ಬೇಗ ಚುನಾವಣೆ ನಡೆಸಿ: ಕುಮಾರಸ್ವಾಮಿ ಒತ್ತಾಯ
ಹೈಕೋರ್ಟ್ ಮುಂಭಾಗದಲ್ಲಿ ಆತ್ಯಹತ್ಯೆಗೆ ಪ್ರಯತ್ನಿಸಿದ ವಕೀಲ
ಸಾಲದ ಬಾಧೆ: ಪತ್ನಿ ಸಹಿತ ಬಿಎಚ್ಇಎಲ್ ಅಧಿಕಾರಿ ಆತ್ಮಹತ್ಯೆ
ಕೋತಿಗಳ ಬದ್ಲು ಉಗ್ರರ ಹಿಡೀರಿ: ಚಿದಾನಂದ ಮೂರ್ತಿ
ನಗರಸಭೆ ಚುನಾವಣೆಯಲ್ಲಿ ಘರ್ಷಣೆ, ಲಾಠಿ ಪ್ರಹಾರ