ಕನ್ನಡಿಗರನ್ನು ಅವಮಾನಿಸಿರು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯೂದವ್ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕನ್ನಡಿಗರ ಬಗ್ಗೆ ಅವ್ಯಾಚ್ಯ ಶಬ್ದದಿಂದ ಮಾತನಾಡಿರುವ ಸಚಿವರು ಕನ್ನಡದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಬಿಹಾರಿ ಸಂಸ್ಕೃತಿಯನ್ನು ಕನ್ನಡದ ಜನತೆ ಮೇಲೆ ಲಾಲೂ ಪ್ರಸಾದ್ ತೋರಿಸುವುದು ಬೇಡ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸಚಿವರು ಕನ್ನಡಿಗರಿಗೆ ಉಪದೇಶ ನೀಡುವ ಅಗತ್ಯವಿಲ್ಲ. ಕನ್ನಡಿಗರ ಬಗ್ಗೆ ಕೀಳುಮಟ್ಟದ ಮನೋಭಾವವನ್ನು ಸೃಷ್ಟಿಸಿರುವ ಸಚಿವರು ಕನ್ನಡ ಜನತೆಯ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದರು.
ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಲಾಲೂ ಪ್ರಸಾದ್ ಹೇಳಿಕೆಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಪ್ರತಿಭಟನೆಯನ್ನು ನಡೆಸಿದರು. ಲಾಲೂ ವಿರುದ್ಧ ಘೋಷಣೆಯನ್ನು ಕೂಗಿ, ಲಾಲೂ ಪ್ರತಿಕೃತಿಯನ್ನು ದಹಿಸಲಾಯಿತು.
|