ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುತ್ತಪ್ಪರೈಯಿಂದ ಜಯ ಕರ್ನಾಟಕ
ಭೂಗತ ಲೋಕದಿಂದ ದೂರ ಸರಿದು ಸಹಜ ಬದುಕು ನಡೆಸಲು ಮುಂದಾಗಿರುವ ಮುತ್ತಪ್ಪ ರೈ ಜಯ ಕರ್ನಾಟಕ ಸಂಘಟನೆಯೊಂದನ್ನು ಹುಟ್ಟುಹಾಕಿದ್ದಾರೆ.

ಮಂಗಳವಾರ ಈ ವಿಷಯವನ್ನು ಪ್ರಕಟಿಸಿದ ಮುತ್ತಪ್ಪರೈ, ರಾಜ್ಯದ ಶಾಂತಿ ಹಾಗೂ ಏಳಿಗೆಗಾಗಿ ಈ ಸಂಘಟನೆಯನ್ನು ಹುಟ್ಟುಹಾಕಲಾಗಿದ್ದು, ಈ ಮೂಲಕ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಸಂಘಟನೆಯ ರೂಪುರೇಷೆಗಳನ್ನು ತಿಳಿಸಿದರು.

ಕನ್ನಡದ ನಾಡು-ನುಡಿ, ನೆಲ-ಜಲ, ಸಂಸ್ಕೃತಿಯನ್ನು ಕಾಪಾಡಲು ಈ ಸಂಸ್ಥೆ ನೆರವಾಗುತ್ತದೆ. ಬಡವರ ಉದ್ದಾರವೇ ಸಂಘಟನೆಯ ಮೂಲ ಧ್ಯೇಯ ಎಂದವರು ತಿಳಿಸಿದರು.

ಈ ಮಧ್ಯೆ ರಾಜಕೀಯಕ್ಕೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮುತ್ತಪ್ಪರೈ, ಸಂಘಟನೆಯನ್ನು ಸಾರ್ವಜನಿಕರ ಏಳಿಗೆಗಾಗಿ ಮೀಸಲಿಡುತ್ತೇನೆ. ರಾಜಕೀಯಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಈ ಸಂಘಟನೆಯ ಮೂಲಕ ಹಳ್ಳಿಗಳಲ್ಲಿನ ಬಡವರಿಗೆ ಬೊರ್ವೆಲ್‌ಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.
ಮತ್ತಷ್ಟು
ಲಾಲೂ ಕನ್ನಡಿಗರ ಕ್ಷಮೆಯಾಚಿಸಲಿ :ಕುಮಾರ್
ಫೆ.14ಕ್ಕೆ ಚಿತ್ರೋದ್ಯಮ ಬಂದ್
ಬೇಗ ಬೇಗ ಚುನಾವಣೆ ನಡೆಸಿ: ಕುಮಾರಸ್ವಾಮಿ ಒತ್ತಾಯ
ಹೈಕೋರ್ಟ್ ಮುಂಭಾಗದಲ್ಲಿ ಆತ್ಯಹತ್ಯೆಗೆ ಪ್ರಯತ್ನಿಸಿದ ವಕೀಲ
ಸಾಲದ ಬಾಧೆ: ಪತ್ನಿ ಸಹಿತ ಬಿಎಚ್ಇಎಲ್ ಅಧಿಕಾರಿ ಆತ್ಮಹತ್ಯೆ
ಕೋತಿಗಳ ಬದ್ಲು ಉಗ್ರರ ಹಿಡೀರಿ: ಚಿದಾನಂದ ಮೂರ್ತಿ