ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಗಾವಣೆಯ ಅಡ್ಡೆಯಾದ ರಾಜಭವನ: ಅಶೋಕ್
ರಾಜಭವನ ಕಾಂಗ್ರೆಸ್ ಭವನವಾಗಿ ಮಾರ್ಪಟ್ಟಿದ್ದು, ಇದನ್ನು ವರ್ಗಾವಣೆ ದಂಧೆಯ ಅಡ್ಡೆ ಎಂದು ಕರೆಯುವುದು ಹೆಚ್ಚು ಸೂಕ್ತವಾಗಿದೆ ಎಂದು ಮಾಜಿ ಸಚಿವ ಆರ್.ಅಶೋಕ್ ಕುಹಕವಾಡಿದ್ದಾರೆ.

ಬಿಇಎಲ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ರಾಲಿಯಲ್ಲಿ ಮಾತನಾಡುತ್ತಿದ್ದ ಅವರು, ರಾಜ್ಯಪಾಲರ ಆಡಳಿತ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಅರಾಜಕತೆ ಕಂಡುಬಂದಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರು ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ಗೆ ಸಹಾಯ ಮಾಡುತ್ತಿದ್ದು ಪ್ರಜೆಗಳನ್ನು ಮರೆತಿದ್ದಾರೆ ಎಂದು ಆಪಾದಿಸಿದರು.

ಅಭಿವೃದ್ಧಿ ಕಾರ್ಯಗಳ ಪರೀಶೀಲನೆ ನಡೆಸುವ ದೃಷ್ಟಿಯಿಂದ ಕನಿಷ್ಟ ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳ ಮತ್ತು ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಬೇಕಿದ್ದ ರಾಜ್ಯಪಾಲರು ಈವರೆಗೆ ಯಾವುದೇ ಸಭೆ ನಡೆಸಿಲ್ಲ ಎಂದು ಅಶೋಕ್ ಬೆಟ್ಟು ಮಾಡಿದರು.

ಕಾಂಗ್ರೆಸಿಗರನ್ನು ಓಲೈಸುವುದು ಬಿಟ್ಟು ರಾಜ್ಯಪಾಲರು ಜನರ ಆಶೋತ್ತರಗಳ ಬಗ್ಗೆ ಗಮನ ಹರಿಸಬೇಕು ಹಾಗೂ ಶೀಘ್ರ ಚುನಾವಣೆಗೆ ಶಿಫಾರಸು ಮಾಡಬೇಕು ಎಂದು ಅಶೋಕ್ ಈ ಸಂದರ್ಭದಲ್ಲಿ ಆಗ್ರಹಿಸಿದರು.
ಮತ್ತಷ್ಟು
ಸಾಹಿತಿ ಚಂಪಾ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ
ದುಷ್ಕರ್ಮಿಗಳ ಗುಂಡಿಗೆ ಕಾರ್ಮಿಕ ಬಲಿ
ಮುತ್ತಪ್ಪರೈಯಿಂದ ಜಯ ಕರ್ನಾಟಕ
ಲಾಲೂ ಕನ್ನಡಿಗರ ಕ್ಷಮೆಯಾಚಿಸಲಿ :ಕುಮಾರ್
ಫೆ.14ಕ್ಕೆ ಚಿತ್ರೋದ್ಯಮ ಬಂದ್
ಬೇಗ ಬೇಗ ಚುನಾವಣೆ ನಡೆಸಿ: ಕುಮಾರಸ್ವಾಮಿ ಒತ್ತಾಯ