ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳಭಟ್ಟಿ ದುರಂತಕ್ಕೆ ಮತ್ತೆ 8 ಬಲಿ  Search similar articles
ಕಳ್ಳಭಟ್ಟಿಯ ಕರಾಳ ನರ್ತನಕ್ಕೆ ಇಂದು ಮತ್ತೆ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 150ರ ಗಡಿಯನ್ನು ದಾಟಿದೆ. ಮೃತಪಟ್ಟವರ ಬಂಧುಗಳ ರೋಧನ ಮುಗಿಲು ಮುಟ್ಟಿದೆ.

ಇಂದು ಬೌರಿಂಗ್ ಆಸ್ಪತ್ರಗೆ ದಾಖಲಾಗಿರುವರ ಪೈಕಿ ಎಂಟು ಮಂದಿ ಸಾವನ್ನಪ್ಪಿದ್ದು, ಮತ್ತೆ ಐದು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶವಪರೀಕ್ಷೆ ಕಾರ್ಯವನ್ನು ಸೂಕ್ತ ರೀತಿಯಲ್ಲಿ ಮಾಡುತ್ತಿಲ್ಲ ಎಂದು ಮೃತರ ಕುಟುಂಬದವರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಬೌರಿಂಗ್ ಆಸ್ಪತ್ರೆಗೆ ಇಂದು ರಾಜ್ಯಪಾಲರ ಸಲಹೆಗಾರ ತಾರಕನ್ ಅವರು ಭೇಟಿ ನೀಡಿದ್ದಾರೆ.

ಈ ಮಧ್ಯೆ ಬೆಂಗಳೂರಿನ ಬಾಗಲೂರು ಲೇಔಟ್‌ನಲ್ಲಿ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಒರ್ವ ಮಹಿಳೆಯು ಶಾಮೀಲಾಗಿರುವ ಬಗ್ಗೆ ತಿಳಿದು ಬಂದಿದ್ದು, ಆಕೆಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಅಲ್ಲದೆ, ಬಾಗಲೂರು ಲೇಔಟ್‌ ಸುತ್ತಮುತ್ತ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ಮತ್ತಷ್ಟು
ಪೂರ್ವಸಮೀಕ್ಷೆ: ಅತಂತ್ರದಲ್ಲಿ ಬಿಜೆಪಿ ಮೇಲುಗೈ
ಮುಗಿದ ಮೂರನೇ ಹಂತದ ಚುನಾವಣಾ ಪ್ರಚಾರ
ಎಲ್ಲ ಬಡವರ ಸಾಲಮನ್ನಾ:ದೇವೇಗೌಡ
ಕಳ್ಳಭಟ್ಟಿ ಮಾರಣ ಹೋಮಕ್ಕೆ 150 ಬಲಿ?
ಆತಂಕವಾದ ಹುಟ್ಟಿದ್ದೆ ಬಿಜೆಪಿಯಿಂದ: ಮೋಯಿಲಿ
ಅಕ್ರಮ ಗಣಿಗಾರಿಕೆಯಲ್ಲಿ ಅನಿಲ್ ಲಾಡ್?