ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಗೆ ಸಿದ್ದು ಅಗತ್ಯವಿಲ್ಲ: ಸದಾನಂದಗೌಡ  Search similar articles
ಭಾರತೀಯ ಜನತಾ ಪಕ್ಷಕ್ಕೆ ಸಿದ್ದರಾಮಯ್ಯ ಅಗತ್ಯ ಕಂಡು ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ನಗರಸಭೆ ಚುನಾವಣೆಗಾಗಿ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತು ಸಿದ್ದರಾಯಮಯ್ಯನವರ ಜೊತೆ ಪಕ್ಷದ ನಾಯಕರ್ಯಾರು ಚರ್ಚೆ ನಡೆಸಿಲ್ಲ. ಅಲ್ಲದೆ, ಬಿಜೆಪಿ ಪಕ್ಷಾಂತರರಿಗೆ ಆಶ್ರಯ ತಾಣವಲ್ಲ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ದಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನವನ್ನು ನಡೆಸಲಿದ್ದು, ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯಪಾಲರು ನಡೆಸಿದ ಆಡಳಿತವೇ ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಕಾರಣವಾಗಿದೆ. ರಸಗೊಬ್ಬರ ಸಮಸ್ಯೆಯಿಂದಾಗಿ ಕಂಗೆಟ್ಟಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮಡಿಕೇರಿ ನಗರ ಸಭೆ ಚುನಾವಣ
ಇಂದು ನಡೆದ ಮಡಿಕೇರಿ ನಗರ ಸಭೆ ಚುನಾವಣೆಯಲ್ಲಿನ ಎರಡು ಸ್ಥಾನಗಳು ಬಿಜೆಪಿ ಪಾಲಾಗಿದೆ. ಅಧ್ಯಕ್ಷರಾಗಿ ಪಿ.ಡಿ. ಪೊನ್ನಪ್ಪ ಆಯ್ಕೆಗೊಂಡಿದ್ದರೆ, ಉಪಾಧ್ಯಕ್ಷರಾಗಿ ಲತಾ ಬಂಗೇರ ಆಯ್ಕೆಗೊಂಡಿದ್ದಾರೆ.
ಮತ್ತಷ್ಟು
ಸದನದಲ್ಲಿ ಮುಗಿಯದ ರಸಗೊಬ್ಬರ ಗಲಾಟೆ
ಗೋಲಿಬಾರ್‌ಗೆ ಬಿಜೆಪಿ ಕಾರಣ: ಕುಮಾರಸ್ವಾಮಿ
ಅನನುಭವಿ ಮುಖ್ಯಮಂತ್ರಿ: ದೇವೇಗೌಡ
ಸದನದಲ್ಲಿ ಮೊಳಗಿದ ಗೋಲಿಬಾರ್
ಪದ್ಮಪ್ರಿಯಾ ಪ್ರಕರಣ: ಅತುಲ್ ಬಂಧನ
ಅಜ್ಞಾತ ಸ್ಥಳದಲ್ಲಿ ಡೇರಾ ಸಚ್ಚಾ