ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾವಣಗೆರೆಯಲ್ಲಿ ರೈತ ಆತ್ಮಹತ್ಯೆ  Search similar articles
ಬೆಂಗಳೂರು: ದಾವಣಗೆರೆ ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ ಬಾಧೆ ತಾಳಲಾರದ ಜಗಳೂರಿನ ಮಡ್ರಹಳ್ಳಿಯ ಬಸವರಾಜ್, ಮಳೆ ಇಲ್ಲದೆ ಬೆಳೆ ಒಣಗಿದ ಪರಿಣಾಮ ತೀವ್ರ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಸವರಾಜ್, ಈ ಹಿಂದೆ ಬಂದ ಬೆಳೆ ಮಾರಾಟಮಾಡಿ ಮನೆ ಕಟ್ಟಿಸುವ ನಿರ್ಧಾರ ಮಾಡಿದ್ದರು. ಮತ್ತು ಈ ಉದ್ದೇಶಕ್ಕೆ ಅವರು ಸಾಕಷ್ಟು ಸಾಲವನ್ನೂ ಮಾಡಿದ್ದರೆನ್ನಲಾಗಿದೆ.

ಇದಲ್ಲದೆ, ಅವರು ಖಾಸಗಿ ಲೇವಾದೇವಿಗಾರರಿಂದಲೂ ಸಾಲಪಡೆದಿದ್ದಾರೆನ್ನಲಾಗಿದೆ. ಒಳ್ಳೆಯ ಬೆಳೆ ಬಂದರೆ ಸಾಲ ಹಿಂತಿರುಗಿಸಬಹುದೆಂಬ ಆತ್ಮವಿಶ್ವಾಸದಲ್ಲಿದ್ದ ಬಸವರಾಜ್, ಬೆಳೆ ಒಣಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಮೃತ ಬಸವರಾಜ್ ಹೆಂಡತಿ ಮತ್ತು ತನ್ನ ಏಕೈಕ ಪುತ್ರನನ್ನು ತೊರೆದಿದ್ದಾರೆ.
ಮತ್ತಷ್ಟು
ಬಿಜೆಪಿಗೆ ಮತ್ತೊಬ್ಬ 'ದಳಪತಿ'
ವಿವಾದದ ಸುಳಿಯಲ್ಲಿ ರೋಷನ್ ಬೇಗ್
ಅರ್ಥಶಾಸ್ತ್ರ-ವಾಣಿಜ್ಯಶಾಸ್ತ್ರ ಕದನ
ಸರಕಾರದಿಂದ ಸಮಯಕ್ಕೆ ತಕ್ಕ ಸುಳ್ಳು: ಖರ್ಗೆ
ಜಾಲಪ್ಪರಿಂದ ಮತ್ತೆ ಪಾಪನಿವೇದನೆ
ಉತ್ತರ ಕರ್ನಾಟಕದ ಋಣ ತೀರಿಸಿ: ಕುಮಾರಸ್ವಾಮಿ