ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬಿಬಿಎಂಪಿ ಚುನಾವಣೆ: ಹೈಕೋರ್ಟ್‌ಗೆ ರಿಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಬಿಎಂಪಿ ಚುನಾವಣೆ: ಹೈಕೋರ್ಟ್‌ಗೆ ರಿಟ್
ಮೂರು ತಿಂಗಳೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿರದ ಕುರಿತು ಮಾಜಿ ಮೇಯರ್ ಪಿ.ಆರ್. ರಮೇಶ್ ಇದೀಗ ಹೈಕೊರ್ಟ್ ಮೆಟ್ಟಿಲೇರಿದ್ದಾರೆ.

ಅಲ್ಲದೆ, ಚುನಾವಣೆಯನ್ನು ಮುಂದೂಡಬೇಕೆಂದು ಸರ್ಕಾರ ಸಲ್ಲಿಸಿರುವ ಅರ್ಜಿ ಪ್ರಶ್ನಿಸಿ ರಮೇಶ್ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಬಿಬಿಎಂಪಿ ಚುನಾವಣೆಯನ್ನು ಮೂರು ತಿಂಗಳೊಳಗೆ ನಡೆಸಬೇಕೆಂಬ ಹೈಕೋರ್ಟ್ ನಿರ್ದೇಶನವನ್ನು ಸರ್ಕಾರ ಪಾಲಿಸುತ್ತಿಲ್ಲ. ಇದುವರೆಗೂ ಯಾವುದೇ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿಲ್ಲ ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಹೈಕೊರ್ಟ್ ಗೆ ಸರ್ಕಾರ ಸಲ್ಲಿಸಿರುವ ಅರ್ಜಿಯ ಕುರಿತು ವಿವರಣೆ ನೀಡಬೇಕೆಂದು ತಿಳಿಸಿರುವ ಅವರು, 20 ತಿಂಗಳಿನಿಂದ ಯಾವುದೇ ಜನಪ್ರತಿನಿಧಿ ಸರ್ಕಾರಗಳು ಇಲ್ಲದಿರು ವುದರಿಂದ ಮಹಾನಗರ ಪಾಲಿಕೆಯಲ್ಲಿನ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಈ ನಿಟ್ಟಿನಲ್ಲಿ ಶೀಘ್ರವೇ ಚುನಾವಣೆ ನಡೆಸುವಂತೆ ಅರ್ಜಿಯಲ್ಲಿ ಅವರು ಆಗ್ರಹಿಸಿದ್ದಾರೆ.
ಮತ್ತಷ್ಟು
ಚರ್ಚ್ ದಾಳಿ: ಕಾಂಗ್ರೆಸ್‌ನಿಂದ ರಾಜಭವನ ಚಲೋ
ಯಡಿಯೂರಪ್ಪಗೆ ಅಹಂಕಾರ:ವಿ.ಎಸ್.ಉಗ್ರಪ್ಪ
ಕೇಂದ್ರ ತನಿಖಾ ತಂಡಕ್ಕೆ ರಾಜ್ಯದ ತಿರುಗೇಟು
ಮದಿರೆ ನೀಡಲು ಮಾನಿನಿಯರಿಗೆ ಅವಕಾಶ:ಹೈಕೋರ್ಟ್
ಎಲ್ಲಾ ತಾಲೂಕಿಗೂ ಆರೋಗ್ಯ ಕವಚ ಯೋಜನೆ:ಸಿಎಂ
ಗೃಹ ಸಚಿವರ ಜೊತೆ ಕೇಂದ್ರ ತಂಡ ಚರ್ಚೆ