ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಗೇನಕಲ್: ಕೇಂದ್ರದ ಮಧ್ಯಸ್ಥಿಕೆಗೆ ಸಿಎಂ ಸ್ವಾಗತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್: ಕೇಂದ್ರದ ಮಧ್ಯಸ್ಥಿಕೆಗೆ ಸಿಎಂ ಸ್ವಾಗತ
ಬೆಂಗಳೂರು: ವಿವಾದಾಸ್ಪದ ಹೊಗೇನಕಲ್ ವಿವಾದ ಕುರಿತು ಉಭಯ ರಾಜ್ಯಗಳ ಸಭೆ ಕರೆಯುವುದಾಗಿ ಕೇಂದ್ರ ಸರ್ಕಾರ ಹೇಳಿರುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಾಗತಿಸಿದ್ದಾರೆ. ಹೊಗೇನಕಲ್ ವಿವಾದ ಸಂಬಂಧ ಜಂಟಿ ಸಮೀಕ್ಷೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ.

ವಿವಾದದ ಸತ್ಯ ಸಂಗತಿ ಗೊತ್ತಾಗಬೇಕು ಎಂಬುದು ರಾಜ್ಯದ ನಿಲುವು. ಕೇಂದ್ರ ಸರ್ಕಾರ ಉಭಯ ರಾಜ್ಯಗಳನ್ನು ಮಾತುಕತೆಗೆ ಕರೆದಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ಮಾತುಕತೆಗೆ ರಾಜ್ಯ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದ್ದಾರೆ.

ಹೂವಿನಡಗಲಿಯ ಎಂಜಿನಿಯರಿಂಗ್ ಕಾಲೇಜನ್ನು ಬಳ್ಳಾರಿಗೆ ಸ್ಥಳಾಂತರ ಮಾಡಿದ್ದಕ್ಕೆ ಯಾವುದೇ ದ್ವೇಷದ ಹಿನ್ನೆಲೆ ಇಲ್ಲ. ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಆ ಕಾರಣದಿಂದ ಸ್ಥಳಾಂತರ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಯಾವುದೇ ಕಾರಣಕ್ಕೂ ತಾವು ಹಗೆತನ ಸಾಧಿಸುವ ರಾಜಕೀಯ ಮಾಡುವುದಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಳ್ಳಾರಿ ಆಡಳಿತ ರೆಡ್ಡಿಗಳಿಗೆ ಹೊರಗುತ್ತಿಗೆ: ಆರ್‌ವಿ
ಸೋನಿ ಆತ್ಮಹತ್ಯೆ: ಆರೋಪಿಗಳ ಜಾಮೀನು ಅರ್ಜಿ ವಜಾ
ಚಿಕ್ಕಮಗಳೂರು:ಉಗ್ರರ ಜಾಲ ಪತ್ತೆಗೆ ತೀವ್ರ ಶೋಧ
ಐದು ವರ್ಷದಲ್ಲಿ 10 ಲಕ್ಷ ಉದ್ಯೋಗ: ಸಿಎಂ
ಹೊರ ರಾಜ್ಯ ನೌಕರರಿಗೆ ಅವಕಾಶ ಇಲ್ಲ: ಕರವೇ
ನ.15ರಂದು ಕನಕ ಜಯಂತಿ: ಈಶ್ವರಪ್ಪ