ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೈಸೂರು ಗೊಮ್ಮಟನಿಗೆ ಮಸ್ತಕಾಭಿಷೇಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈಸೂರು ಗೊಮ್ಮಟನಿಗೆ ಮಸ್ತಕಾಭಿಷೇಕ
ಇಲ್ಲಿನ ಗೊಮ್ಮಟಗಿರಿಯಲ್ಲಿರುವ 13ನೇ ಶತಮಾನದ ಗೊಮ್ಮಟೇಶ್ವರ ವಿಗ್ರಹಕ್ಕೆ ಭಾನುವಾರ 59ನೇ ಮಸ್ತಕಾಭಿಷೇಕ ನಡೆಯಿತು. ಗೊಮ್ಮಟೇಶ್ವರ ವಿಗ್ರಹ ವಿವಿಧ ರಂಗುಗಳಲ್ಲಿ ಕಂಗೊಳಿಸಿತು.

ನಗರದಿಂದ 15 ಕಿ.ಮೀ. ದೂರದಲ್ಲಿರುವ ಬೆಟ್ಟದಲ್ಲಿ ಮಸ್ತಕಾಭಿಷೇಕ ಉತ್ಸವ ನಡೆಯಿತು. ಈ ವಾರ್ಷಿಕ ಮಸ್ತಕಾಭಿಷೇಕದಲ್ಲಿ ನೂರಾರು ಜೈನ ಭಕ್ತರು ಜೈಕಾರ ಹಾಕಿ ವಿರಾಗಿಗೆ ನಮನ ಅರ್ಪಿಸಿದರು.

ಶಿವಮೊಗ್ಗದ ಹೊಂಬುಜಾ ಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಂತ್ರೋಕ್ತ ಪೂಜಾ ಕೈಂಕರ್ಯಗಳು ನಡೆದವು. ನಂತರ ಸಂಪ್ರದಾಯದಂತೆ ಗೊಮ್ಮಟೇಶ್ವರನಿಗೆ ಅರಿಶಿಣ, ಗಂಧ, ಕುಂಕುಮ, ಎಳೆನೀರು, ಹಾಲು ಮತ್ತು ಕಬ್ಬಿನ ಹಾಲಿನ ಅಭಿಷೇಕ ಮಾಡಲಾಯಿತು.

ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊವ್ಮೆ ಮಹಾ ಮಸ್ತಕಾಭಿಷೇಕ ನಡೆದ ಮಾದರಿಯಲ್ಲಿಯೇ ಇಲ್ಲಿ ಪ್ರತಿ ವರ್ಷ ಮಸ್ತಕಾಭಿಷೇಕ ನಡೆಯುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದತ್ತ ಅಭಿಯಾನಕ್ಕೆ ಶಾಂತಿಯುತ ತೆರೆ
ಬೇಕಾಬಿಟ್ಟಿ ಹೇಳಿಕೆ ನೀಡಬೇಡಿ: ಸುದರ್ಶನ್
ಮೊಕದ್ದಮೆ ರಾಜಕಾರಣಿಗಳಿಗೆ ಪಾಠ: ಸುರೇಶ್
ಅಶೋಕ್‌‌ರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ:ದೇಶಪಾಂಡೆ
ಜೆಡಿಎಸ್ ದುರ್ಬಲ ಆಗಿಲ್ಲ: ರೇವಣ್ಣ
ಮಾನನಷ್ಟ ಮೊಕದ್ದಮೆ ಸ್ವಾಗತಿಸುತ್ತೇನೆ: ಕುಮಾರಸ್ವಾಮಿ