ದೇಶವನ್ನೇ ತಲ್ಲಣಗೊಳಿಸಿದ್ದ ಬಹುಕೋಟಿ ನಕಲಿ ಛಾಪಾಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲಾ ತೆಲಗಿಗೆ ಅಪರಾಧಿಯೆಂದು ಸಾಬೀತಾಗಿ ಶಿಕ್ಷೆಯಾಗಿರುವುದು ಜಗತ್ತಿಗೇ ತಿಳಿದಿರುವ ಸಂಗತಿ. ಆದರೆ, ಕಾರಾಗೃಹದಲ್ಲಿ ಕಠಿಣ ಶಿಕ್ಷೆ ಅನುಭವಿಸಬೇಕಿದ್ದ ತೆಲಗಿ ಈಗ ರಾಜಾತಿಥ್ಯ ಪಡೆಯುತ್ತಿರುವ ಸಂಗತಿ ಗೊತ್ತಾಗಿದೆ. ತೆಲಗಿ ಈ ಹಿಂದೆ ಹೈಕೋರ್ಟ್ ಗೆ ಮನವಿ ಸಲ್ಲಿಸಿ ನನಗೆ ಸಕ್ಕರೆ ಖಾಯಿಲೆ ಇದೆ.. ಎಂದು ಖಾಯಿಲೆಗಳ ಪಟ್ಟಿಯನ್ನೇ ಸಲ್ಲಿಸಿದ್ದ. ಮತ್ತು ಇದರಿಂದಾಗಿ ಆರೋಗ್ಯ ಹಾಳಾಗಿದ್ದು, ಮನೆ ಊಟ ನೀಡುವಂತೆ ಕೋರಿಕೊಂಡಿದ್ದ.ಇದಕ್ಕೆ ಸ್ಪಂದಿಸಿದ್ದ ಹೈಕೋರ್ಟ್ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿತ್ತು. ಆದರೆ ಈಗ ತೆಲಗಿ ರಾಜಾತಿಥ್ಯ ಪಡೆಯುತ್ತಿದ್ದು, ಮೀನು, ಮೊಟ್ಟೆ, ಮಾಂಸ ಗಳನ್ನು ಮೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆಂದು ಗೊತ್ತಾಗಿದೆ. ಅಪರಾಧ ಸಾಬೀತಾದ ಆರೋಪಿಗಳಿಗೆ ಇತರ ಕೈದಿಗಳಿಗಿಂತ ಭಿನ್ನ ಆಹಾರ ಕೊಡುವುದಕ್ಕೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿದೆ. |
|