ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಟ ಜಗ್ಗೇಶ್ ಸ್ಪರ್ಧೆ ಅನಿಶ್ಚಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಟ ಜಗ್ಗೇಶ್ ಸ್ಪರ್ಧೆ ಅನಿಶ್ಚಿತ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ನಟ ಜಗ್ಗೇಶ್ ತುರುವೇಕೆರೆ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಅನಿಶ್ಚಿತವಾಗಿದೆ. ತುರುವೆಕೆರೆಯಲ್ಲಿ ತಮ್ಮ ಛಾಪಿದೆ. ತಮ್ಮ ಅಭಿಮಾನಿಗಳ ಮತಗಳಿವೆ ಎಂದು ಅವರು ತಿಳಿಸಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಜಗ್ಗೇಶ್ ಭರವಸೆ ನೀಡಿದರು. ಮುಖ್ಯಮಂತ್ರಿಯವರ ಅಭಿವೃದ್ದಿಪರ ಕಾಳಜಿ ಕಂಡು ತಾನು ಬಿಜೆಪಿ ಸೇರಿರುವೆ. ಪಕ್ಷ ಯಾವ ತೀರ್ಮಾನ ಕೈಗೊಂಡರು ಅದಕ್ಕೆ ಬದ್ಧ ಎಂದರು.ತಮ್ಮ ಸ್ಪರ್ಧೆಯನ್ನು ಪಕ್ಷ ನಿರ್ಧರಿಸಲಿದೆ ಎಂದು ಅವರು ಹೇಳಿದರು.

ನೈತಿಕ ಹಕ್ಕಿಲ್ಲ: ಕೃಷ್ಣೇ ಬೈರೇಗೌಡರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ನಾನು ಸ್ವಂತ ಶಕ್ತಿಯಿಂದ ಮೇಲೆ ಬಂದವನು. ಕೃಷ್ಣೇಬೈರೇಗೌಡರ ತರಹ ಅಪ್ಪನ ಹೆಸರು ಹೇಳಿಕೊಂಡು ಮೇಲೆ ಬಂದವನಲ್ಲ. ಬೈರೇಗೌಡ ತೆಗೆದರೆ ಉಳಿಯುವುದು ಬರೀ ಶೂನ್ಯ ಎಂದು ತಿರುಗೇಟು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್ ಬಿಡಲಾರೆ: ಸಿದ್ದರಾಮಯ್ಯ
ಮತ್ತೆ 'ಕೈ' ಹಿಡಿಯುವೆ: ಮನೋರಮಾ
ಸಚಿವರ ಕಾರ್ಯವೈಖರಿ ಬಗ್ಗೆ ತೃಪ್ತಿ: ಸಿಎಂ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಗತ್ಯವಿಲ್ಲ:ಸಿದ್ದರಾಮಯ್ಯ
ಶೀಘ್ರವೇ ನಗರಾಭಿವೃದ್ಧಿ ನೀತಿ:ಸುರೇಶ್ ಕುಮಾರ್
ಸ್ಪೀಡ್ ಗವರ್ನರ್ ಆದೇಶ ವಾಪಸ್:ಸಚಿವ ಸಂಪುಟ