ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಮಸ್ಯೆ ನಿವಾರಣೆಗೆ ಉತ್ತಮ ಶಿಕ್ಷಣ ಮದ್ದು:ಆಡ್ವಾಣಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮಸ್ಯೆ ನಿವಾರಣೆಗೆ ಉತ್ತಮ ಶಿಕ್ಷಣ ಮದ್ದು:ಆಡ್ವಾಣಿ
ದೇಶದ ಎಲ್ಲ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಗುಣಮಟ್ಟದ ಶಿಕ್ಷಣವೊಂದೇ ಔಷಧ. ಪ್ರತಿಭಾವಂತರು ಯಾವುದೇ ಕಾರಣಕ್ಕೂ ಅವಕಾಶ ವಂಚಿತರಾಗಬಾರದು. ಶಿಕ್ಷಣದಲ್ಲಿ ಸುಲಭ ದರದಲ್ಲಿ ಎಲ್ಲ ವರ್ಗದ ಜನರು ಪಡೆಯುವಂತಾಗಬೇಕು. ಇದನ್ನು ಅನುಷ್ಠಾನಕ್ಕೆ ತರುವುದು ಹೇಗೆ ಎಂಬುದು ಸವಾಲಿನ ಪ್ರಶ್ನೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಹೇಳಿದರು.

ಬೆಳಗಾವಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ರಜತ ಮಹೋತ್ಸವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಂದ್ರಯಾನ-1 ಅಂತರಿಕ್ಷ ನೌಕೆಯ ಯಶಸ್ವಿ ಉಡ್ಡಯನಕ್ಕೆ ಸಂಬಂಧಿಸಿದಂತೆ ವಿಜ್ಞಾನಿಗಳ ಈ ಸಾಧನೆಯನ್ನು ಶ್ಲಾಘಿಸಿದರು.

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಸದ್ಯದಲ್ಲಿಯೇ ವ್ಯವಸ್ಥೆ ಮಾಡಲಾಗುವುದು. ಡಿಸೆಂಬರ್‌ನಲ್ಲಿ ವಿಶ್ವಕನ್ನಡ ಸಮ್ಮೇಳನವನ್ನು ವಿಜೃಂಭಣೆಯಿಂದ ಆಯೋಜಿಸಲಾಗುವುದು. ಸುವರ್ಣಸೌಧ ನಿರ್ಮಾಣ ಕೆಲಸ ಆದಷ್ಟು ಬೇಗ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು:ಬಹುಮಹಡಿ ಕಟ್ಟಡ ಕುಸಿತ
ಶಾಸ್ತ್ರೀಯ ಸ್ಥಾನ:ನಾಳೆ ರಾಜಭವನ ಮುತ್ತಿಗೆ-ಕರವೇ
ವಿದ್ಯುತ್ ಕಡಿದ ಶೀಘ್ರ ಹಿಂದಕ್ಕೆ : ಈಶ್ವರಪ್ಪ
ತಾಲೂಕು ಪಂಚಾಯ್ತಿ ರದ್ದಾಗದು: ಸಿಎಂ
ಆಪರೇಶನ್ ಕಮಲ:ಮಂಡ್ಯ ನಗರಸಭೆ ಬಿಜೆಪಿ ತೆಕ್ಕೆಗೆ
ಪ್ರಗತಿ ಪರಿಶೀಲನೆಗೆ ಸಿಎಂ ನಗರ ಪ್ರದಕ್ಷಿಣೆ !