ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಈಶ್ವರಪ್ಪ ಹೇಳಿಕೆಗೆ ವಿಶ್ವನಾಥ್ ಆಕ್ರೋಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈಶ್ವರಪ್ಪ ಹೇಳಿಕೆಗೆ ವಿಶ್ವನಾಥ್ ಆಕ್ರೋಶ
ಉಡುಪಿ ಕನಕಗೋಪುರದ ಕುರಿತು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆಯ ವಿವಾದ ಇನ್ನೂ ಹಸಿರಾಗಿರುವಾಗಲೇ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಪೇಜಾವರಶ್ರೀಗಳ ಶಾಪದಿಂದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಬೀದಿಗೆ ಬಿದ್ದಿದ್ದಾರೆ ಎಂದು ಈಶ್ವರಪ್ಪನವರು ಹೇಳಿಕೆ ನೀಡಿರುವುದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.

ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿಶ್ವನಾಥ್, ಅಧಿಕಾರ ಆಸೆಯಿಂದ ಹಿಂದುಳಿದ ಜನಾಂಗಗಳ ಮಧ್ಯೆ ಒಡಕು ಉಂಟು ಮಾಡಲು ಈಶ್ವರಪ್ಪ ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕನಕಗೋಪುರ ಇರಲಿಲ್ಲ ಎನ್ನುತ್ತಿರುವ ಈಶ್ವರಪ್ಪ ಮುಂದೊಂದು ದಿನ ಕನಕ ಕಿಂಡಿಯೇ ಇಲ್ಲ ಎನ್ನಬಹುದು. ಈ ಮೂಲಕ ಶೋಷಿತ ಸಮುದಾಯವನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯದಲ್ಲಿ ಪಕ್ಷೇತರರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿದೆ. ಪಕ್ಷೇತರರು ಬೆಂಬಲ ನೀಡದಿದ್ದರೆ ಬಿಜೆಪಿ ಕೂಡ ಬೀದಿಗೆ ಬೀಳುತ್ತದೆ ಎಂಬುದನ್ನು ಮರೆಯಬೇಡಿ ಎಂದು ಅವರು ಎಚ್ಚರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸ್ತ್ರೀಯ ಸ್ಥಾನ:ದೆಹಲಿಗೆ ನಿಯೋಗ-ಸಿಎಂ
ಸಮಸ್ಯೆ ನಿವಾರಣೆಗೆ ಉತ್ತಮ ಶಿಕ್ಷಣ ಮದ್ದು:ಆಡ್ವಾಣಿ
ಬೆಂಗಳೂರು:ಬಹುಮಹಡಿ ಕಟ್ಟಡ ಕುಸಿತ
ಶಾಸ್ತ್ರೀಯ ಸ್ಥಾನ:ನಾಳೆ ರಾಜಭವನ ಮುತ್ತಿಗೆ-ಕರವೇ
ವಿದ್ಯುತ್ ಕಡಿದ ಶೀಘ್ರ ಹಿಂದಕ್ಕೆ : ಈಶ್ವರಪ್ಪ
ತಾಲೂಕು ಪಂಚಾಯ್ತಿ ರದ್ದಾಗದು: ಸಿಎಂ