ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹಾಲಿಗೆ ಪ್ರೋತ್ಸಾಹ ಧನ:ಸರ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಲಿಗೆ ಪ್ರೋತ್ಸಾಹ ಧನ:ಸರ್ಕಾರ
ಹಾಲಿನ ದರಗಳ ಕುರಿತು ಹಾಲು ಉತ್ಪಾದಕರ ಒಕ್ಕೂಟ ಹಾಗೂ ಸರ್ಕಾರದ ನಡುವಿನ ಒಳಜಗಳ ಮುಂದುವರಿಯುತ್ತಿರುವಂತೆ ಪ್ರೋತ್ಸಾಹ ಧನ ನೀಡುವ ಯೋಜನೆಗೆ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಈ ಸಂಬಂಧ ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನವು ಬಿಜೆಪಿ ರಾಜ್ಯದಲ್ಲಿ ನೂರು ದಿನ ಪೂರೈಸಿದ ದಿನವಾದ ಸೆಪ್ಟೆಂಬರ್ 9ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಘೋಷಿಸಿತ್ತು.

ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರ 32.50 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸರ್ಕಾರ ತಿಳಿಸಿದೆ. ಹಾಲಿಗೆ ಪ್ರೋತ್ಸಾಹ ಧನ ನೀಡುವುದಾದರೆ ಹಾಲಿನ ದರವನ್ನು ಏರಿಕೆ ಮಾಡಬೇಕೆಂದು ಹಾಲು ಉತ್ಪಾದಕರ ಒಕ್ಕೂಟ ಆಗ್ರಹಿಸಿತ್ತು.

ಆದರೆ ಇದನ್ನು ತಳ್ಳಿ ಹಾಕಿದ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿಗೆ ಪ್ರೋತ್ಸಾಹ ಧನ ಅಗತ್ಯವಾಗಿದ್ದು, ಇದನ್ನು ಸರ್ಕಾರ ಭರಿಸುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಹೇಂದ್ರಗೆ ಹೈಕೋರ್ಟ್ ಜಾಮೀನು
ರಾಜ್ಯೋತ್ಸವ ಪ್ರಶಸ್ತಿಗೆ 10ಸಾವಿರ ಅರ್ಜಿ !
ಕನ್ನಡ ನಾಮಫಲಕ ಹಾಕದಿದ್ದರೆ ಜೈಲು:ಬಚ್ಚೇಗೌಡ
ಮೈತ್ರಿಗೆ ಸಿದ್ದರಾಮಯ್ಯ ವಿರೋಧ:ಖರ್ಗೆ
ಈಶ್ವರಪ್ಪ ಹೇಳಿಕೆಗೆ ವಿಶ್ವನಾಥ್ ಆಕ್ರೋಶ
ಶಾಸ್ತ್ರೀಯ ಸ್ಥಾನ:ದೆಹಲಿಗೆ ನಿಯೋಗ-ಸಿಎಂ