ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣ: ಲೋಕಾಯುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣ: ಲೋಕಾಯುಕ್ತ
ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹುಟ್ಟಿಸಿದ ಗಣಿ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣಗೊಂಡಿರುವುದಾಗಿ ಲೋಕಾಯುಕ್ತ ಶನಿವಾರ ತಿಳಿಸಿದೆ.

ಅಕ್ರಮ ಗಣಿಗಾರಿಕೆ ನಡೆಸಿ ಪ್ರಕೃತಿ ಸಂಪತ್ತು ನುಂಗಿರುವ ಗಣಿಧಣಿಗಳ ಒಳಮುಖವನ್ನು ಬಹಿರಂಗಪಡಿಸಲು ಲೋಕಾಯುಕ್ತ ಸಜ್ಜುಗೊಂಡಿದ್ದು, ಈ ತಿಂಗಳಲ್ಲೇ ವರದಿ ಬಹಿರಂಗ ಪಡಿಸುವ ಸೂಚನೆ ನೀಡಿದೆ.

ಸಾಕಷ್ಟು ಅಕ್ರಮ ಸಂಪತ್ತು ಗಳಿಕೆಯ ಮೂಲವಾಗಿರುವ ಗಣಿ ಉದ್ಯಮ ಸರ್ಕಾರಕ್ಕೂ ಬಿಸಿ ತುಪ್ಪವಾಗಿ ಕೊನೆಗೂ ಲೋಕಾಯುಕ್ತ ತನಿಖೆಗೆ ಒಳಪಡಿಸಿತ್ತು.

ಈಗ ತನಿಖೆ ಪೂರ್ಣಗೊಂಡು ವರದಿ ಸಿದ್ಧವಾಗಿದೆ. ಸಾಕಷ್ಟು ಅಕ್ರಮಗಳು ಬಯಲಾಗುವ ಸಾಧ್ಯತೆ ಇದೆ. ಈ ಕುರಿತು ವಿವರಣೆ ನೀಡಿರುವ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಭ್ರಷ್ಟರನ್ನು ಹಿಡಿದರೂ ಸಹ ಸರ್ಕಾರದಿಂದ ಶಿಕ್ಷೆಯಾಗುವುದು ವಿಳಂಬ. ಆದರೂ, ಯಾವುದಕ್ಕೂ ಅಂಜದೆ, ಅಳುಕದೆ ಲೋಕಾಯುಕ್ತ ಅಕ್ರಮ ಗಣಿ ಪತ್ತೆ ಹಾಗೂ ತನಿಖೆಯನ್ನು ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಟ್ಟಡ ಕುಸಿತ: ಘಟನೆ ವಿರುದ್ಧ ಪಾಲಿಕೆ ದೂರು
ಪೇಜಾವರಶ್ರೀ ಶಾಪದಿಂದ ಬೀದಿಗೆ ಬಿದ್ದಿಲ್ಲ: ವಿಶ್ವನಾಥ್
ಕೋಮುಶಕ್ತಿ ಮಣಿಸಲು ಮೈತ್ರಿ ಅಗತ್ಯ: ಕಾಂಗ್ರೆಸ್
ಉಪಚುನಾವಣೆ: ಜೆಡಿಎಸ್ 4 ಸ್ಥಾನಕ್ಕೆ ಸ್ಪರ್ಧೆ
ಗೌಡರ ಹೇಳಿಕೆ-ಪ್ರತಿಕ್ರಿಯೆಗೆ ಖರ್ಗೆ ನಕಾರ
ವಿಜ್ಞಾನಿಗಳಿಗೆ ಯಡಿಯೂರಪ್ಪ ಅಭಿನಂದನೆ