ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಿತ್ತೂರು ಉತ್ಸವದಲ್ಲಿ ರಾಜಕಾರಣಿಗಳ ಚಕಮಕಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿತ್ತೂರು ಉತ್ಸವದಲ್ಲಿ ರಾಜಕಾರಣಿಗಳ ಚಕಮಕಿ
ಐತಿಹಾಸಿಕ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಪ್ರತಿ ಪಕ್ಷ ನಾಯಕರ ಹೇಳಿಕೆ ವಿವಾದಕ್ಕೆಡೆಮಾಡಿದ್ದು, ರಾಜಕಾರಣಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್ ಪ್ರತಿಪಕ್ಷಗಳ ನಾಯಕ ವಿ.ಎಸ್. ಉಗ್ರಪ್ಪ ಮಾತನಾಡುತ್ತಾ, ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಗಳು ಬಂದಿಲ್ಲ ಎಂದರಲ್ಲದೆ, ಕಿತ್ತೂರು ಅಭಿವೃದ್ಧಿಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಹೇಳಿದರು.

ಇದು ಸಚಿವರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು. ಇದು ರಾಜಕೀಯ ಜಟಾಪಟಿಗೆ ವೇದಿಕೆಯಾಯಿತು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಸಚಿವ ಜನಾರ್ಧನ ರೆಡ್ಡಿ ಕೂಡ ಉಗ್ರಪ್ಪರ ಹೇಳಿಕೆಯನ್ನು ವಿರೋಧಿಸಿ, ವೇದಿಕೆಯನ್ನು ರಾಜಕೀಯವಾಗಿ ಬಳಸಿಕೊಳ್ಳಬೇಡಿ ಎಂದು ವಿನಂತಿಸಿದರು.

ಕೂಡಲೇ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಯತ್ತ ನುಗ್ಗಿ ಮಾತಿನ ಚಕಮಕಿ ನಡೆಸಿದರು. ಇದೇ ಸಂದರ್ಭದಲ್ಲಿ ಪೊಲೀಸರು ನಡುವೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಕ್ರಮ ಗಣಿಗಾರಿಕೆ ತನಿಖೆ ಪೂರ್ಣ: ಲೋಕಾಯುಕ್ತ
ಕಟ್ಟಡ ಕುಸಿತ: ಘಟನೆ ವಿರುದ್ಧ ಪಾಲಿಕೆ ದೂರು
ಪೇಜಾವರಶ್ರೀ ಶಾಪದಿಂದ ಬೀದಿಗೆ ಬಿದ್ದಿಲ್ಲ: ವಿಶ್ವನಾಥ್
ಕೋಮುಶಕ್ತಿ ಮಣಿಸಲು ಮೈತ್ರಿ ಅಗತ್ಯ: ಕಾಂಗ್ರೆಸ್
ಉಪಚುನಾವಣೆ: ಜೆಡಿಎಸ್ 4 ಸ್ಥಾನಕ್ಕೆ ಸ್ಪರ್ಧೆ
ಗೌಡರ ಹೇಳಿಕೆ-ಪ್ರತಿಕ್ರಿಯೆಗೆ ಖರ್ಗೆ ನಕಾರ