ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬುದ್ಧ ವಿಹಾರ ಉದ್ಘಾಟನೆಗೆ ಪ್ರತಿಭಾ ಪಾಟೀಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುದ್ಧ ವಿಹಾರ ಉದ್ಘಾಟನೆಗೆ ಪ್ರತಿಭಾ ಪಾಟೀಲ್
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಜನವರಿ ಏಳರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಆ ಸಂದರ್ಭದಲ್ಲಿ ಗುಲ್ಬರ್ಗಾದಲ್ಲಿ ಬುದ್ಧ ವಿಹಾರವನ್ನು ಉದ್ಘಾಟಿಸಲಿದ್ದಾರೆ.

ಅಲ್ಲದೆ, ಬುದ್ಧವಿಹಾರದಲ್ಲಿ ಜನವರಿ 19ರಂದು ನಡೆಯಲಿರುವ ‘ಸರ್ವಧರ್ಮ ಸಮ್ಮೇಳನ’ದಲ್ಲಿ ಬೌದ್ಧ ಧರ್ಮಗುರು ದಲೈಲಾಮ ಪಾಲ್ಗೊಳ್ಳಲಿದ್ದಾರೆ. ಈ ಎರಡೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಕಾಂಗ್ರೆಸ್ ನಿಯೋಗ ಆಹ್ವಾನ ನೀಡಿದೆ.

ಇದೇ ಸಂದರ್ಭದಲ್ಲಿ ಬುದ್ಧ ವಿಹಾರಕ್ಕೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಖರ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಉಪಮುಖ್ಯಮಂತ್ರಿ ಎಂ. ಪಿ. ಪ್ರಕಾಶ್ ಸೇರಿದಂತೆ ಹಲವು ಮುಖಂಡರನ್ನು ಈ ನಿಯೋಗವು ಒಳಗೊಂಡಿದೆ..

ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿಗಳು, ಬುದ್ಧ ವಿಹಾರಕ್ಕೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಚಾರ ಕಾರ್ಯದಿಂದ ದೂರ:ಸಿದ್ಧು ಎಚ್ಚರಿಕೆ
ಮಂಗಳೂರು ಬಸ್ ಅಪಘಾತ:5 ಸಾವು
ಬಿಜೆಪಿಗೆ ಗರ್ವಭಂಗ: ಕುಮಾರಸ್ವಾಮಿ ಭವಿಷ್ಯ
ಬಹುಮಹಡಿ ಕುಸಿತ: ಬಿದರಿ ಸ್ಪಷ್ಟನೆ
ಉಪಚುನಾವಣೆಗೆ ಜಗ್ಗೇಶ್ ಸ್ಫರ್ಧೆ ಇಲ್ಲ
ಕಿತ್ತೂರು ಉತ್ಸವದಲ್ಲಿ ರಾಜಕಾರಣಿಗಳ ಚಕಮಕಿ