ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಆಪರೇಶನ್ ಕಮಲಕ್ಕೆ ರೆಡ್ಡಿಗಳ ಹಣ: ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಪರೇಶನ್ ಕಮಲಕ್ಕೆ ರೆಡ್ಡಿಗಳ ಹಣ: ಕುಮಾರಸ್ವಾಮಿ
ಅನ್ಯ ಪಕ್ಷಗಳ ಜನಪ್ರತಿನಿಧಿಗಳಿಗೆ ಗಣಿದೊರೆಗಳಾದ ರೆಡ್ಡಿಗಳ ಸೂಟ್‌ಕೇಸ್ ಹಣ-ಬಿಜೆಪಿ ಹಾರ ಎಂದು ಮಾಜಿ ಮುಖ್ಯಮಂತ್ರಿ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಶಾಸಕರು ಮತ್ತು ನಗರಸಭೆ ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿರುವ ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.

ಜನರ ತೀರ್ಪಿಗೆ ವಿರುದ್ಧವಾಗಿ ಶಾಸಕರೇ ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುತ್ತಿರುವಾಗ ಪಾಪ,ತಾಲೂಕು ಪಂಚಾಯ್ತಿ,ನಗರಸಭೆ ಸದಸ್ಯರನ್ನು ಟೀಕೆ ಮಾಡುವುದು ಏಕೆ ?. ಬಳ್ಳಾ ರಿಯಲ್ಲಿ ಮತದಾರರನ್ನು ಹಣ ನೀಡಿ ಖರೀದಿ ಮಾಡಿದ ರೀತಿಯಲ್ಲೇ ರಾಜ್ಯದ ಜನರನ್ನು ಖರೀದಿಸಬಹುದು ಎಂದು ಗಣಿ ಬ್ರದರ್ಸ್ ತಿಳಿದಿದ್ದಾರೆ.

ಎಲ್ಲ ಕಡೆ ಆಪರೇಷನ್ ಮಾಡಲು ಹೋದರೆ ಜನರು ಒದೆ ನೀಡುತ್ತಾರೆ ಎಂದು ಕಿಡಿಕಾರಿದರು. ಹಣ ಪಡೆದು ಬಿಜೆಪಿಗೆ ಹೋದವರಿಂದ ಬಿಟ್ಟ ಪಕ್ಷಕ್ಕೆ ಮತ್ತು ಸೇರಿದ ಪಕ್ಷಕ್ಕೆ ಲಾಭವಾಗುತ್ತದೆ ಎಂಬುದು ಸುಳ್ಳು.

ಹಣದಿಂದಲೇ ಎಲ್ಲವನ್ನೂ ಪಡೆಯುವುದಾಗಿದ್ದರೆ ಬಂಡವಾಳಶಾಹಿಗಳ ಕೈಗೆ ಆಡಳಿತ ಸಿಕ್ಕಿ ಬಹಳ ವರ್ಷಗಳಾಗುತ್ತಿತ್ತು ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸ್ತ್ರೀಯ ಸ್ಥಾನ: ವಿಪಕ್ಷ ಹೇಳಿಕೆಗೆ ಖಂಡನೆ
ಸಾರಿಗೆ ಸಂಸ್ಥೆ ಬಸ್-ಬೈಕ್ ಡಿಕ್ಕಿ: 3 ಸಾವು
ಉಗ್ರರ ಭೀತಿ: ರಾಜ್ಯಾದ್ಯಂತ ಕಟ್ಟೆಚ್ಚರ
ನಿಯೋಗದಿಂದ ಹಿಂದೆ ಸರಿದ ಕಾಂಗ್ರೆಸ್
ಬುದ್ಧ ವಿಹಾರ ಉದ್ಘಾಟನೆಗೆ ಪ್ರತಿಭಾ ಪಾಟೀಲ್
ಪ್ರಚಾರ ಕಾರ್ಯದಿಂದ ದೂರ:ಸಿದ್ಧು ಎಚ್ಚರಿಕೆ