ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜಕೀಯ ತೀರ್ಮಾನಕ್ಕೆ ಬೆಂಬಲವಿಲ್ಲ: ಜೆಡಿಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯ ತೀರ್ಮಾನಕ್ಕೆ ಬೆಂಬಲವಿಲ್ಲ: ಜೆಡಿಎಸ್
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಕುರಿತು ದೆಹಲಿಗೆ ತೆರಳಲಿರುವ ಸರ್ವಪಕ್ಷ ನಿಯೋಗದಿಂದ ಹಿಂದೆ ಸರಿದ ಬೆನ್ನಲ್ಲೇ ಜೆಡಿಎಸ್ ಕೂಡ ಭಾಗವಹಿಸದಿರಲು ತೀರ್ಮಾನಿಸಿದೆ.

ಈ ಕುರಿತು ಮಾತನಾಡಿದ ಜೆಡಿಎಸ್ ಪಕ್ಷದ ವಕ್ತಾರ ವೈ.ಎಸ್.ವಿ.ದತ್ತ, ಸರ್ಕಾರದ ವಿಫಲತೆಗಳ ಬಗ್ಗೆ ಜನರಲ್ಲಿ ಬೇಸರ ಉಂಟಾಗಿರುವ ಕಾರಣ ಭಾವನಾತ್ಮಕ ವಿಚಾರಗಳ ಮೂಲಕ ಜನರ ದಿಕ್ಕನ್ನು ಬೇರೆಡೆ ತಿರುಗಿಸುವ ಇಂತಹ ರಾಜಕೀಯದ ತೀರ್ಮಾನಗಳಿಗೆ ನಮ್ಮ ಬೆಂಬಲವಿಲ್ಲ ಎಂದು ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ 371 ವಿಧಿಗೆ ತಿದ್ದುಪಡಿ ತರುವ ಒತ್ತಾಯ ಎನ್ ಡಿಎ ಸರ್ಕಾರ ಇದ್ದಾಗ ಮಾಡಿದಾಗ ಗೃಹ ಸಚಿವರಾದ ಎಲ್.ಕೆ. ಅಡ್ವಾಣಿ ಅವರೇ ತಿರಸ್ಕರಿಸಿದ್ದರು. ಆಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಡಿಸಲು ಇವರಿಂದ ಸಾಧ್ಯವಾಗಲಿಲ್ಲ. ಈಗ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದರು.

ವಿರೋಧ ಪಕ್ಷಗಳನ್ನು ದಮನ ಮಾಡುವ ಪ್ರಕೃತಿಯನ್ನು ಅಧಿಕಾರಕ್ಕೆ ಬಂದಾಗಿನಿಂದಲೂ ಯಡಿಯೂರಪ್ಪ ಅನುಸರಿಸುತ್ತಿದ್ದಾರೆ. ಇಂತಹವರಿಗೆ ಹೇಗೆ ಬೆಂಬಲ ನೀಡಬೇಕು ಎಂದು ಅವರು ಲೇವಡಿ ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶಾಸ್ತ್ರೀಯ ಸ್ಥಾನ: ನ.3ರಂದು ಧರಣಿ-ಕಸಾಪ
ಹೊರಟ್ಟಿಗೆ ಜೆಡಿಎಸ್ ಅಧ್ಯಕ್ಷ ಪಟ್ಟ ?
ಸರ್ವಪಕ್ಷ ನಿಯೋಗದ ಜತೆ ತೆರಳುವುದಿಲ್ಲ: ಖರ್ಗೆ
ಅಧಿಕ ವಿದ್ಯುತ್ ಬಳಕೆ: ದಕ್ಷಿಣ ರಾಜ್ಯಗಳಿಗೆ ಎಚ್ಚರಿಕೆ
ಸಂಪುಟ ವಿಸ್ತರಣೆ ಸುಲಭ-ಪ್ರಶಸ್ತಿ ಆಯ್ಕೆ ಕಷ್ಟ: ಸಿಎಂ
ಪಾಟೀಲ್, ಬೆಳೆಗೆರೆಗೆ ರಾಜ್ಯೋತ್ಸವ ಪ್ರಶಸ್ತಿ ?