ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾರ್ಕಳಕ್ಕೆ ನಕ್ಸಲ್ ತಂಡ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾರ್ಕಳಕ್ಕೆ ನಕ್ಸಲ್ ತಂಡ ಭೇಟಿ
ಕಾರ್ಕಳ ತಾಲೂಕಿನ ತಿಂಗಳೆಗೆ ಸುಮಾರು ಏಳು ಮಂದಿ ನಕ್ಸಲೀಯರ ತಂಡವೊಂದು ಭೇಟಿ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ತಿಂಗಳೆ ಗರೋಡಿ ಹತ್ತಿರದ ನೆಲ್ಲಿಕಟ್ಟೆ ಪರಿಸರದ ಮನೆಗಳಿಗೆ ಭೇಟಿ ನೀಡಿದ ನಕ್ಸಲರ ತಂಡದಲ್ಲಿ ಮೂವರು ಯುವತಿಯರಿದ್ದರು ಎನ್ನಲಾಗಿದ್ದು, ಇವರು ತಮ್ಮನ್ನು ಬೆಂಗಳೂರಿನವರು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಕ್ಸಲೀಯರು ಹಲವು ಮನೆಗಳಿಗೆ ಭೇಟಿ ನೀಡಿದ್ದು, ಇವರು ಹಂಚಿರುವ ಕರಪತ್ರಗಳಲ್ಲಿ ಬಿಜೆಪಿ ನಾಯಕರು ಮತ್ತು ಸರ್ಕಾರದ ವಿರುದ್ಧ ಹರಿಹಾಯ್ದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಅಲ್ಲದೆ, ಹೆಬ್ರಿ ಸೀತಾನದಿ ಭೋಜ ಶೆಟ್ಟಿ ಹತ್ಯೆಯನ್ನು ತಾವೇ ಮಾಡಿರುವುದಾಗಿ ಅವರು ಬರೆದಿರುವ ಕರಪತ್ರದಲ್ಲಿ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ಹೇಳಿದ್ದು, ಇದೀಗ ಹೆಬ್ರಿ ಸೇರಿದಂತೆ ವಿವಿಧೆಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾಜಕೀಯ ತೀರ್ಮಾನಕ್ಕೆ ಬೆಂಬಲವಿಲ್ಲ: ಜೆಡಿಎಸ್
ಶಾಸ್ತ್ರೀಯ ಸ್ಥಾನ: ನ.3ರಂದು ಧರಣಿ-ಕಸಾಪ
ಹೊರಟ್ಟಿಗೆ ಜೆಡಿಎಸ್ ಅಧ್ಯಕ್ಷ ಪಟ್ಟ ?
ಸರ್ವಪಕ್ಷ ನಿಯೋಗದ ಜತೆ ತೆರಳುವುದಿಲ್ಲ: ಖರ್ಗೆ
ಅಧಿಕ ವಿದ್ಯುತ್ ಬಳಕೆ: ದಕ್ಷಿಣ ರಾಜ್ಯಗಳಿಗೆ ಎಚ್ಚರಿಕೆ
ಸಂಪುಟ ವಿಸ್ತರಣೆ ಸುಲಭ-ಪ್ರಶಸ್ತಿ ಆಯ್ಕೆ ಕಷ್ಟ: ಸಿಎಂ