ಜನಪರ ಹೋರಾಟ ಹಾಗೂ ಆಂದೋಲನವನ್ನು ಕೈಬಿಡುವುದಾಗಲಿ, ಪೊಲೀಸರಿಗೆ ಶರಣಾಗುವ ಕುರಿತು ತಾನು ಚಿಂತನೆ ನಡೆಸಿಲ್ಲ ಎಂದು ಪಶ್ಚಿಮಘಟ್ಟ ಭಾಗದಲ್ಲಿ ನಕ್ಸಲ್ ನಾಯಕನಾಗಿರುವ ಬಿ.ಜಿ.ಕೃಷ್ಣಮೂರ್ತಿ ಸ್ಪಷ್ಟಪಡಿಸಿದ್ದಾನೆ.
ಶೃಂಗೇರಿ ವಳಲೆಯಲ್ಲಿ ಬಿಜೆಪಿ ಮುಖಂಡ ರಂಗನಾಥ್ ಹಾಗೂ ಗ್ರಾಮಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಕೃಷ್ಣಮೂರ್ತಿ, ಈ ಕುರಿತು ಹಬ್ಬಿರುವುದು ಕೇವಲ ವದಂತಿ. ಇದು ಸ್ಥಾಪಿತ ಹಿತಾಸಕ್ತಿಗಳ ಹುನ್ನಾರ ಎಂದೂ ದೂರಿದ್ದಾನೆ.
ನಕ್ಸಲ್ ಸುದ್ದಿ ನಮ್ಮ ಮೂಲದಿಂದ ಸರಿಯಾಗಿಯೇ ಮಾಧ್ಯಮಗಳಿಗೆ ತಲುಪುತ್ತದೆ. ಇತ್ತೀಚೆಗೆ ಅಂಗಡಿಯೊಂದರಿಂದ ನಾವು 24ಸಾವಿರ ರೂಪಾಯಿ ತಂದಿದ್ದೇವು. ಆದರೆ ಪತ್ರಿಕೆಗಳಲ್ಲಿ 27ಸಾವಿರ ರೂಪಾಯಿ ಎಂದು ಪ್ರಕಟಗೊಂಡಿತ್ತು.
ಈ ಬಗ್ಗೆ ನಾವು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವುದಾಗಿ ಕೃಷ್ಣಮೂರ್ತಿ ಸ್ಪಷ್ಟಪಡಿಸಿರುವುದಾಗಿ ಹೇಳಲಾಗಿದೆ. ಆದರೂ ತನ್ನ ಬಂಧನ, ಹತ್ಯೆ ಕುರಿತು ಹಬ್ಬಿದ ವರದಿ ಬಗ್ಗೆ ಆಚ್ಚರಿ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ. |