ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ನಕ್ಸಲ್ ಚಳವಳಿ ಮತ್ತೆ ಗರಿಗೆದರಿದ್ದು, ಪೊಲೀಸ್ ಇಲಾಖೆ ಉಭಯ ಜಿಲ್ಲೆಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದೆ.
ಇನ್ನೊಂದೆಡೆ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾರುವ ಶಂಕೆಯ ಮೇಲೆ ಬಂಧಿಸಿರುವ ಶಿಕಾರಿಪುರದ ಜಗನ್ನಾಥ್ ನನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಗುರಿಪಡಿಸಿರುವುದಾಗಿ ಮೂಲಗಳು ಹೇಳಿವೆ.
ಉಡುಪಿ ಜಿಲ್ಲೆಯ ಕೆಲ ಪರಿಸರದಲ್ಲಿ ನಕ್ಸಲೀಯರು ನಿತ್ಯ ಓಡಾಡುತ್ತಿದ್ದು, ಮಾಹಿತಿ ತಲುಪಿ ಪೊಲೀಸರು ಸ್ಥಳ ತಲುಪುವಷ್ಟರಲ್ಲಿ ನಕ್ಸಲೀಯರು ತಪ್ಪಿಸಿಕೊಳ್ಳುತ್ತಿದ್ದಾರೆ. ಮತ್ತೆ ಕಾರ್ಯಾಚರಣೆ ಚುರುಕುಗೊಳಿಸಿರುವ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿವೆ.
ಶಿಕಾರಿಪುರದಲ್ಲಿ ಬಂಧಿತನಾಗಿರುವ ಜಗನ್ನಾಥ್ನನ್ನು ಕೊಪ್ಪ ತಾಲೂಕು ವಡೆಯರ ಮಠಕ್ಕೆ ಕರೆತಂದು ಸ್ಫೋಟಕ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
|