ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 2009ರೊಳಗೆ ರಾಜ್ಯದ ರೈಲ್ವೆ ಕಾಮಗಾರಿ ಪೂರ್ಣ: ವೇಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009ರೊಳಗೆ ರಾಜ್ಯದ ರೈಲ್ವೆ ಕಾಮಗಾರಿ ಪೂರ್ಣ: ವೇಲು
ಕರ್ನಾಟಕದಲ್ಲಿ ನಡೆಯುತ್ತಿರುವ ವಿವಿಧ ರೈಲು ಯೋಜನೆಗಳ ಕಾಮಗಾರಿಗಳು 2009ರೊಳಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಡಾ. ಆರ್. ವೇಲು ತಿಳಿಸಿದ್ದಾರೆ.

ನಂಜನಗೂಡು- ಚಾಮರಾಜನಗರ ಬ್ರಾಡ್ ಗೇಜ್ ರೈಲು ಸಂಚಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಐದಾರು ಕಡೆಗಳಲ್ಲಿ ಮೀಟರ್ ಗೇಜ್‌‌ನ್ನು ಬ್ರಾಡ್ ಗೇಜ್‌ಗೆ ಪರಿವರ್ತಿಸುವ ಕಾಮಗಾರಿಯೂ 2009ರೊಳಗೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.

ಮೈಸೂರು- ರಾಮನಗರ, ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ ಕಾರ್ಯ ನಡೆಯುತ್ತಿದೆ. ಶ್ರೀರಂಗಪಟ್ಟಣ ಬಳಿ ಇರುವ ಟಿಪ್ಪು ಸೇತುವೆ ಈ ಕಾರ್ಯಕ್ಕೆ ಅಡಚಣೆಯಾಗುತ್ತಿರುವ ಕಾರಣ ಪ್ರಾಚ್ಯವಸ್ತು ಇಲಾಖೆಯವರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರೈಲ್ವೆ ಇಲಾಖೆಯು ನೌಕರರರಿಗೆ ಪಿಂಚಣಿ ನೀಡುವ ಸೌಲಭ್ಯ ಜಾರಿಗೊಳಿಸಿದೆ. ಐದನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆನೆ ದಾನ: ಯಡಿಯೂರಪ್ಪ ವಿರುದ್ಧವೇ ಲೋಕಾಯುಕ್ತಕ್ಕೆ ದೂರು
ಚಿಕ್ಕಮಗಳೂರು: ನಕ್ಸಲರಿಗಾಗಿ ತೀವ್ರ ಶೋಧ
ರೇವಣ್ಣ ವಿರುದ್ಧ ಮತ್ತೊಂದು ತನಿಖೆಗೆ ಆದೇಶ
3ನೇ ದಿನಕ್ಕೆ ಕಾಲಿಟ್ಟ ವೈದ್ಯರ ಮುಷ್ಕರ
ರಸ್ತೆ ಅಗಲೀಕರಣಕ್ಕೆ ನಿರ್ಧಾರ: ಸುಬ್ರಹ್ಮಣ್ಯ ನಾಯ್ಡು
ಹೊಗೇನಕಲ್: ಮೊಯ್ಲಿ ಹೇಳಿಕೆಗೆ ಸಿಎಂ ಆಕ್ರೋಶ